ಕರ್ನಾಟಕ

karnataka

ETV Bharat / videos

ಟ್ಯಾಂಕರ್​ ಆಗಮಿಸುತ್ತಿದ್ದಂತೆ ನೀರಿಗಾಗಿ ಸರ ಸರನೆ ಏರಿ ಬಿಡ್ತಾರೆ ಹೆಣ್ಮಕ್ಳು... ವಿಡಿಯೋ

By

Published : Jun 13, 2021, 1:39 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಸಮಸ್ಯೆ ಎಷ್ಟಿದೆ ಎಂಬುವುದಕ್ಕೆ ಸಾಕ್ಷಿ ಹೇಳುವ ವಿಡಿಯೋ ಒಂದು ಲಭ್ಯವಾಗಿದೆ. ನಗರದ ಚಾಣಕ್ಯಪುರಿ ಪ್ರದೇಶದ ವಿವೇಕಾನಂದ ಕ್ಯಾಂಪ್​ನದ್ದು ಎನ್ನಲಾದ ಈ ವಿಡಿಯೋದಲ್ಲಿ, ದೆಹಲಿ ಮಹಾನಗರ ಪಾಲಿಕೆಯ ನೀರಿನ ಟ್ಯಾಂಕರ್ ತಮ್ಮ ಏರಿಯಾಗೆ ಆಗಮಿಸುತ್ತಿದ್ದಂತೆ ಕೆಲ ಹೆಣ್ಣು ಮಕ್ಕಳು ಸರ ಸರನೆ ಟ್ಯಾಂಕರ್​ ಮೇಲೆ ಏರಿ ಬಿಡುತ್ತಾರೆ. ಇನ್ನುಳಿದವರು ನೀರು ತುಂಬಿಸಿಕೊಳ್ಳಲು ಕೆಳಗಡೆಯಿಂದ ಪೈಪ್​ಗಳನ್ನು ಕೊಡುತ್ತಾರೆ. ಟ್ಯಾಂಕ್​ ಮೇಲಿರುವ ಹೆಣ್ಣು ಮಕ್ಕಳು ಪಟ ಪಟ ಅಂತ ಪೈಪ್​ಗಳನ್ನು ಅಳವಡಿಸುತ್ತಾರೆ. ಜನ ಮುಗಿಬಿದ್ದು ಸಿಕ್ಕಿದ ಬಕೆಟ್, ಪಾತ್ರೆಗಳಲ್ಲಿ ನೀರು ತುಂಬಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳು ಟ್ಯಾಂಕರ್ ಏರುವ ವೇಗ ನೋಡಿದ್ರೆ ಈ ಪ್ರದೇಶದಲ್ಲಿ ಪ್ರತಿನಿತ್ಯದ ಪರಿಸ್ಥಿತಿ ಇದೇ ಆಗಿದೆ ಎಂಬಂತೆ ಕಾಣುತ್ತೆ. ಹೀಗಾಗಿ ಅವರಿಗೆ ಟ್ಯಾಂಕರ್​ ಏರುವುದು ಅಭ್ಯಾಸವಾಗಿಬಿಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ​

ABOUT THE AUTHOR

...view details