ಪಾದಚಾರಿ ಸೇತುವೆ ಮೇಲೆ ದುಷ್ಕರ್ಮಿಯ ಅಟ್ಟಹಾಸ: ಚಾಕುವಿನಿಂದ ಕೊಲೆ ಯತ್ನ - Man survives knife attack on a pedestrian bridge in the Kurla area in Mumbai
ಮಹಾರಾಷ್ಟ್ರದ ಮುಂಬೈನ ಕುರ್ಲಾ ಪ್ರದೇಶದ ಪಾದಚಾರಿ ಸೇತುವೆಯ ಮೇಲೆ ದುಷ್ಕರ್ಮಿಯೋರ್ವ ವ್ಯಕ್ತಿಯ ಮೇಲೆ ಏಕಾಏಕಿ ಚಾಕು ದಾಳಿ ನಡೆಸಿದ್ದಾನೆ. ಅದೃಷ್ಟವಶಾತ್ ವ್ಯಕ್ತಿಗೆ ಯಾವುದೇ ಗಾಯಗಳಾಗಿಲ್ಲ. ‘ಯಾವುದೇ ಹಣ ಕದಿಯಲು ಅಥವಾ ದರೋಡೆಗೆ ದುಷ್ಕರ್ಮಿ ಪ್ರಯತ್ನಿಸಿಲ್ಲ. ಇದು ತೀವ್ರವಾದ ಗಾಯ ಅಥವಾ ಕೊಲೆ ಮಾಡುವ ಉದ್ದೇಶದಿಂದ ಮಾಡಿದ ದಾಳಿಯಾಗಿರಬಹುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.