‘ಕರ್ತಾರ್ಪುರ್ ಕಾರಿಡಾರ್’ ಯೋಜನೆ: ಭಾರತ-ಪಾಕಿಸ್ತಾನಕ್ಕೇನು ಲಾಭ? ಸ್ಪೆಷಲ್ ರಿಪೋರ್ಟ್ - ಕರ್ತಾಪುರ ಗುರುದ್ವಾರಕ್ಕೆ ಭಾರತೀಯರು ಪ್ರವೇಶ
ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ವೈಷಮ್ಯವನ್ನು ತಿಳಿಗೊಳಿಸಬಲ್ಲ ಕರ್ತಾರ್ಪುರ್ ಗುರುದ್ವಾರಕ್ಕೆ ನಾಳೆಯಿಂದ ಭಾರತೀಯರು ನೇರವಾಗಿ ಪ್ರವೇಶಿಸಬಹುದು. ಭಾರತ ಹಾಗೂ ಪಾಕಿಸ್ತಾನ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ಕರ್ತಾರ್ಪುರ ಕಾರಿಡಾರ್’ ನ. 9 ರಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ. ಗುರುನಾನಕ್ ಅವರ 550ನೇ ಜನ್ಮದಿನಕ್ಕೂ (ನವೆಂಬರ್ 12) ಮುನ್ನ ಕಾರಿಡಾರ್ ಬಳಕೆಗೆ ಲಭ್ಯವಾಗಲಿದ್ದು, ಸಿಖ್ ಸಮುದಾಯದ ದಶಕಗಳ ಬೇಡಿಕೆ ಕಾರ್ಯರೂಪಕ್ಕೆ ಬರುತ್ತಿದೆ. ಈ ಯೋಜನೆ ಏನು? ಇದರಿಂದ ಭಾರತ-ಪಾಕಿಸ್ತಾನಕ್ಕೆ ಏನು ಲಾಭ ಬನ್ನಿ ನೋಡಿಬರೋಣ.