ಕರ್ನಾಟಕ

karnataka

ETV Bharat / videos

ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರ ಸಾವು: ತಾಯಿಯೊಂದಿಗೆ ಪ್ರಾಣ ಬಿಟ್ಟ ಮಗು! - ರಸ್ತೆ ಅಪಘಾತದಲ್ಲಿ ನಾಲ್ವರು ಸಾವು

By

Published : Feb 14, 2020, 2:09 PM IST

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ನಡೆದಿದೆ. ತಡ ತಾಲೂಕಿನ ಪನ್ನಂಗಾಡು ಬಳಿ ನಿಂತ ಹಾಲಿನ ಟ್ಯಾಂಕರ್​ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜಾಗಿದ್ದು, ಎರಡು ಪುಟ್ಟ ಕಂದಮ್ಮಗಳು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಯಶ್ವಂತ್​ ಎಂಬುವರು ತನ್ನ ತಂದೆ-ತಾಯಿಯನ್ನು ಅಮೆರಿಕಕ್ಕೆ ಕಳುಹಿಸಿಲು ಚೆನ್ನೈ ಏರ್ಪೋರ್ಟ್​ಗೆ ಕುಟುಂಬ ಸಮೇತ ತೆರಳಿದ್ದರು. ತಂದೆ-ತಾಯಿ ಬಿಟ್ಟು ವಾಪಸ್​ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರು ವಿಜಯಲಕ್ಷ್ಮೀ (37), ಅನುಸೆಲ್ವಿ (27), ಒಂದು ವರ್ಷದ ಮಗು ಜೊತೆ ಮತ್ತೊಂದು ಮಗು ಎಂದು ಗುರುತಿಸಲಾಗಿದೆ. ಇನ್ನು ಯಶ್ವಂತ್​ ಜೊತೆ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮಂದಿನ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details