ಏಕಾಏಕಿ ಬೆಂಕಿ: ಹೊತ್ತಿ ಉರಿದ ಕಾರು, ಸ್ಥಳದಲ್ಲೇ ಐವರು ಸಜೀವ ದಹನ
ಚಿತ್ತೂರು(ತೆಲಂಗಾಣ): ಬೆಂಗಳೂರಿನಿಂದ ಪಲುಮನೇರುಗೆ ತೆರಳುತ್ತಿದ್ದ ವೇಳೆ ಕಾರ್ವೊಂದಕ್ಕೆ ಏಕಾಏಕಿ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿತ್ತೂರು ಜಿಲ್ಲೆ ಗಂಗಾವರಂ ಮಂಡಲದ ಬಳಿ ಕಾರು ನಿಯಂತ್ರಣ ತಪ್ಪಿ ರೋಡ್ನಿಂದ ಕೆಳಗೆ ಉರುಳಿದ್ದರಿಂದ ಕಾರಿನ ಇಂಜಿನ್ ಸ್ಫೋಟಗೊಂಡು ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಈ ವೇಳೆ ಓರ್ವ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಉಳಿದಂತೆ ಐವರು ಸಜೀವ ದಹನಗೊಂಡಿದ್ದಾರೆ.
Last Updated : Sep 14, 2019, 10:46 AM IST