ಕೊರೊನಾ ಸೋಂಕು ಭಯ: ಸಾವನ್ನಪ್ಪಿ 18 ಗಂಟೆ ಕಳೆದರೂ ಶವದತ್ತ ಸುಳಿಯದ ಜನ - ಪೊಲೀಸರೇ ಹೊತ್ತೋದ್ರು ಶವ
ವ್ಯಕ್ತಿಯೊಬ್ಬರು ಸಾವನ್ನಪ್ಪಿ 18 ಗಂಟೆಗಳು ಕಳೆದರೂ ಕೊರೊನಾ ಸೋಂಕು ಭಯದಿಂದ ಯಾರೊಬ್ಬರೂ ಮೃತದೇಹದ ಬಳಿ ಸುಳಿಯಲೇ ಇಲ್ಲ. ಕೊನೆಗೆ ಘಟನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಶವದ ವಿಲೇವಾರಿ ಮಾಡಬೇಕಾಯ್ತು. ಎಲ್ಲಿ ಕೊರೊನಾ ಸೋಂಕು ಬಾಧಿಸುತ್ತೋ ಎಂಬ ಭಯದಿಂದ ಜನರು ಮೃತದೇಹದ ಬಳಿ ಬಂದಿರಲಿಲ್ಲ ಎಂದು ತಿಳಿದುಬಂದಿದೆ. ಈ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
Last Updated : Apr 11, 2020, 3:47 PM IST