ಕರ್ನಾಟಕ

karnataka

ETV Bharat / videos

20ನೇ ಕಾರ್ಗಿಲ್​ ವಿಜಯ್​ ದಿವಸ್​ ಮರುದಿನವೇ ಇಬ್ಬರು ಉಗ್ರರ ಹತ್ಯೆ

By

Published : Jul 27, 2019, 2:06 PM IST

ಭಾರತದ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿಯಾದ ಕಾರ್ಗಿಲ್ ಯುದ್ಧ ವಿಜಯೋತ್ಸವಕ್ಕೆ ನಿನೆಗೆ 20 ವರ್ಷವಾಯಿತು. ಈ ಸಂದರ್ಭದಲ್ಲಿ ದೇಶಾದ್ಯಂತ ಹುತಾತ್ಮ ಯೋಧರು ಮತ್ತು ಕಾರ್ಗಿಲ್ ವೀರಾಗ್ರಣಿಗಳಿಗೆ ಗೌರವ ಸಮರ್ಪಿಸಲಾಯಿತು. ವಿಜಯೋತ್ಸವ ಆಚರಣೆ 24 ಗಂಟೆಯ ಕಳೆಯುವ ಮೊದಲೇ ಕಣಿವೆ ರಾಜ್ಯದಲ್ಲಿ ಉಗ್ರರ ಗುಂಡಿನ ಧ್ವನಿ ಕೇಳಿ ಬಂದಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಶನಿವಾರ ಬೆಳ್ಳಂ ಬೆಳಗ್ಗೆ ಸಂಭವಿಸಿದ ಭದ್ರತಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ. ಕಣಿವೆ ಇನ್ನೊಂದು ಭಾಗದಲ್ಲಿ ನಡೆದ ಉಗ್ರರ ದಾಳಿಗೆ ಓರ್ವ ಯೋಧ ಮೃತಪಟಿದ್ದಾರೆ.

ABOUT THE AUTHOR

...view details