ಪುರಸಭೆ ಚುನವಾಣೆ ಹಿನ್ನೆಲೆ ತೆಲಂಗಾಣದ ವನಪರ್ತಿ ಜಿಲ್ಲಾ ಪೊಲೀಸರು ವಾಹನ ತನಿಖೆ ಕೈಗೊಂಡಿದ್ದರು. ಈ ವೇಳೆ ಎಕೋ ಪಾರ್ಕ್ ಬಳಿ ಸೋಮವಾರ ರಾತ್ರಿ ವಾಹನ ತಪಾಸಣೆ ಕೈಗೊಂಡಿದ್ದ ಶ್ರೀರಂಗಾಪುರಂ ಮುಖ್ಯ ಪೇದೆ ಸಲೀಮ್ ಖಾನ್ ಅವರಿಗೆಗೆ ಪೆಚ್ಚೇರುನಿಂದ ಬರುತ್ತಿದ್ದ ಸ್ವಿಫ್ಟ್ ಡಿಜೈರ್ ಕಾರು ಡಿಕ್ಕಿ ಹೊಡೆದಿದೆ. ತೀವ್ರ ಗಾಯವಾಗಿದ್ದ ಮುಖ್ಯಪೇದೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುವ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.