ಕರ್ನಾಟಕ

karnataka

By

Published : Jan 6, 2020, 11:55 PM IST

ETV Bharat / videos

ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್​ಗೆ ಬೆಂಕಿ: 50 ಜನರಿಗೆ ಗಾಯ

ಆಂಧ್ರ ಪ್ರದೇಶ: ಪುರಿಯಿಂದ ರಾಮೇಶ್ವರಂಗೆ ಯಾತ್ರಾರ್ಥಿಗಳು ಪ್ರಯಾಣ ಮಾಡುತ್ತಿದ್ದ ಖಾಸಗಿ ಟ್ರಾವೆಲ್ ಬಸ್, ಮತ್ತೊಂದು ಬಸ್​ಗೆ ಡಿಕ್ಕಿ ಹೊಡೆದು, ಮತ್ತೆ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಗೆ ಗುದ್ದಿದೆ. ಪರಿಣಾಮ ಬಸ್​ಗೆ ತಕ್ಷಣವೇ ಬೆಂಕಿ ಹತ್ತಿಕೊಂಡಿದೆ. ಆಂಧ್ರ ಪ್ರದೇಶದ ಶ್ರೀಕಾಕುಲಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸುಮಾರು 50 ಜನ ಯಾತ್ರಾರ್ಥಿಗಳು ಗಾಯಗೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾತ್ರಾರ್ಥಿಗಳು ಉತ್ತರಖಂಡ ರಾಜ್ಯದವರಾಗಿದ್ದು, ಸುಮಾರು 100 ಜನ ಯಾತ್ರಾರ್ಥಿಗಳು ಆಂಧ್ರಕ್ಕೆ ಎರಡು ಬಸ್​ನಲ್ಲಿ ಪ್ರವಾಸಕ್ಕೆ ಬಂದಿದ್ದರು.

ABOUT THE AUTHOR

...view details