ತಾಜ್ಮಹಲ್ ಶೀಘ್ರದಲ್ಲೇ ರಾಮ್ ಮಹಲ್ ಆಗಲಿದೆ: ಬಿಜೆಪಿ ಶಾಸಕ - ಬಿಜೆಪಿ ಶಾಸಕ ಸುರೇಂದ್ರ ಸಿಂಗ್
ಲಖನೌ(ಉತ್ತರ ಪ್ರದೇಶ): ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ಸುದ್ದಿಯಲ್ಲಿರುವ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ಸದ್ಯ ಮತ್ತೊಂದು ಹೇಳಿಕೆ ನೀಡಿದ್ದಾರೆ. ಆದಷ್ಟು ಬೇಗ ತಾಜ್ ಮಹಲ್ ರಾಮ್ ಮಹಲ್ ಆಗಲಿದೆ ಎಂದು ಉತ್ತರ ಪ್ರದೇಶ ಬಲಿಯಾ ಜಿಲ್ಲೆಯ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ. ಶಿವಾಜಿಯ ವಂಶಸ್ಥರು ಉತ್ತರ ಪ್ರದೇಶಕ್ಕೆ ಬಂದಿದ್ದಾರೆ. ತಾಜ್ ಮಹಲ್ ಹಿಂದೆ ಶಿವ ಮಹಲ್ ಆಗಿದ್ದು, ಇದೀಗ ರಾಮ್ ಮಹಲ್ ಮಾಡಲಾಗುವುದು ಎಂದು ಹೇಳಿದ್ದಾರೆ.
Last Updated : Mar 13, 2021, 8:00 PM IST