ಆಂಧ್ರದಲ್ಲಿ ವರುಣಾರ್ಭಟ: ಚಿತ್ರಾವತಿ ನದಿಯಲ್ಲಿ ಸಿಲುಕಿದ್ದ 11 ಜನರ ರಕ್ಷಿಸಿದ ವಾಯುಪಡೆ - 11 people trapped in chitravati river rescued by indian air force
ನೆರೆ ರಾಜ್ಯ ಆಂಧ್ರಪ್ರದೇಶದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಎಡೆಬಿಡದೆ ಮಳೆಯಾಗುತ್ತಿದೆ. ಇದರಿಂದಾಗಿ ಅನಂತಪುರದ ಚಿತ್ರಾವತಿ ನದಿ ತುಂಬಿ ಹರಿಯುತ್ತಿದೆ. ಜಿಲ್ಲೆಯ ರಾಪ್ತಾಡಿನ ಚಿನ್ನ ಕೊತ್ತಪಲ್ಲಿ ವಲಯದ ವೆಲ್ದುರ್ತಿಯಲ್ಲಿ 11 ಮಂದಿ ನದಿಯಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದರು. ನಂತರ ವಾಯುಪಡೆ ಹೆಲಿಕಾಪ್ಟರ್ ಸಹಾಯದಿಂದ ಅವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ.