ಕರ್ನಾಟಕ

karnataka

By

Published : May 10, 2023, 11:30 AM IST

ETV Bharat / sukhibhava

ಬೇಸಿಗೆ ಸೌಂದರ್ಯ ಅನುಭವಿಸಲು ಈ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ!

ಬೇಸಿಗೆಯಲ್ಲಿ ಅನೇಕ ಸ್ಥಳಗಳ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಜೊತೆಗೆ ಬೇಗೆಯಿಂದಲೂ ನಿಮ್ಮನ್ನು ರಕ್ಷಿಸುತ್ತದೆ. ಅಂತಹ ಸ್ಥಳ ಪರಿಚಯ ಇಲ್ಲಿದೆ.

Visit these places once to experience the beauty of summer
Visit these places once to experience the beauty of summer

ಬೆಂಗಳೂರು: ಪ್ರಯಾಣ ಎಂಬುದು ಕೇವಲ ಹೊಸ ಸ್ಥಳಗಳ ಅನ್ವೇಷಣೆ ಅಲ್ಲ. ಅದು ನೆಮ್ಮದಿ, ಹೊಸತನ, ಉತ್ಸಾಹ, ಕಲಿಕೆಗೂ ಅವಕಾಶ ನೀಡುತ್ತದೆ. ಇಂತಹ ಪ್ರಯಾಣಿಗರಿಗೆ ಬೇಸಿಗೆ ಎಂಬುದು ಮತ್ತೊಂದು ದೊಡ್ಡ ಸಂಭ್ರಮ. ಅನೇಕ ಪ್ರಯಾಣಿಕರು ಈ ಋತುಮಾನದಲ್ಲಿ ಹೊಸ ಹೊಸ ಸ್ಥಳಗಳ ಅನ್ವೇಷಣೆ ಮಾಡುತ್ತಾರೆ. ಗಿರಿ ಶಿಖರ, ಕಡಲ ತೀರ, ಕಾಡು ಅಥವಾ ಗಿರಿಧಾಮಗಳ ಅರಸುತ್ತಾ ಹೋಗುತ್ತಾರೆ. ಈ ರೀತಿ ಬೇಸಿಗೆಯಲ್ಲಿ ಅದ್ಬುತ ತಾಣಗಳನ್ನು ಸುತ್ತ ಬೇಕು ಎಂದರೆ, ಇವು ಹೊಸ ಅನುಭೂತಿ ನೀಡುವುದು ಸುಳ್ಳಲ್ಲ. ಬೇಸಿಗೆ ಅವಧಿಯಲ್ಲಿ ಬೇಗೆಯನ್ನು ಹೊಡದೋಡಿಸಿ ಅಲ್ಲಿನ ಅದ್ಬುತ ಸೌಂದರ್ಯ ಅನುಭವಿಸಬೇಕು ಎಂದರೆ ಈ ಅದ್ಬುತ ತಾಣಗಳನ್ನು ಅನ್ವೇಷಿಸಬಹುದು.

ಲಡಾಖ್​: ಹಿಮಾಲಯದ ಸೌಂದರ್ಯ ಸವಿಯಬೇಕು ಎಂಬ ಆಸೆ ಇದ್ದರೆ, ಅದಕ್ಕೆ ಲಡಾಖ್​ ಸೂಕ್ತ ಸ್ತಳ. ಅದರಲ್ಲೂ ನೀವು ಬೈಕರ್​ ಆಗಿದ್ದರೆ, ನಿಮ್ಮ ದೊಡ್ಡ ಕನಸು ನನಸಾಗಿಸುವ ತಾಣ ಇದಾಗಿದೆ. ಗ್ರಾಗ್ಗಿ ಬೆಟ್ಟ ಪ್ರದೇಶದಲ್ಲಿ ನೀಲಿ ಸರೋವರ, ಶುಭ್ರ ಆಕಾಶದ ಕೆಳಗೆ, ಬೈಕ್​ನಲ್ಲಿ ಸಾಗುವುದು ಊಹಿಸಲಾಗದ ಅದ್ಬುತ ಅನುಭೂತಿ ನೀಡುತ್ತದೆ. ಇಲ್ಲಿನ ಪಚ್ಚೆ ಪಾಂಗಾಂಘ್​ ತ್ಸೋ ಸರೋವಾರ ಮತ್ತು ನುಬ್ರಾ ಕಣಿವೆಯ ಮರಳು ದಿಬ್ಬಗಳ ಮೇಲೆ ಒಂಟೆ ಸವಾರಿಯನ್ನು ಕೂಡ ಮಾಡಬಹುದಾಗಿದೆ.

ಕಾಶ್ಮೀರ: ಬಹುತೇಕ ಪ್ರವಾಸಿಗರ ಮೆಚ್ಚಿನ ಸ್ಥಳ ಇದಾಗಿದೆ. ಚಳಿಗಾಲದಲ್ಲಿ ಒಂದು ರೀತಿಯ ಸೊಬಗು ಹೊಂದಿರುವ ಈ ಕಣಿವೆ ರಾಜ್ಯ ಬೇಸಿಗೆಯಲ್ಲಿ ಹಚ್ಚ ಹಸುರಿನಿಂದ ಕಂಗೊಳಿಸುತ್ತದೆ. ದಾಲ್​ ಸರೋವರ ಸೇರಿದಂತೆ ಬಾಲಿವುಡ್​ ಸಿನಿಮಾಗಳಲ್ಲಿ ಕಾಣುಬು ಗುಲ್ಮಾರ್ಗ್​​ನ ಗೊಂಡೊಲಾ, ಪಹಲ್ಗಾಮ್​ನಲ್ಲಿ ಅದ್ಬುತ ಪ್ರಕೃತಿ ಅಹ್ಲಾದಿಸಬಹುದು.

ಮನಾಲಿ: ಬೇಸಿಗೆ ಬೇಗೆ ಓಡಿಸುವ ಮತ್ತೊಂದು ಪ್ರಕೃತಿ ರಮಣೀಯ ತಾಣ ಎಂದರೆ ಅದು ಮನಾಲಿ. ಇಲ್ಲಿನ ಸೋಲಾಂಗ್​ ಕಣಿವೆ ಅದ್ಬುತ ಸಾಹಸ ಕ್ರೀಡೆಗೂ ಸಾಕ್ಷಿಯಾಗಿದೆ. ಇಲ್ಲಿನ ಗಿರಿ ಶಿಖರದ ಕಣಿವೆಯಲ್ಲಿ ಪ್ಯಾರಾ ಗ್ಲೈಡಿಂಗ್​, ಜೋರ್ಬಿಂಗ್​, ಕ್ವಾಡ್​ ಬೈಕಿಂಗ್​ ಸೇರಿದಂತೆ ಹಲವು ಚಟವಟಿಕೆ ನಡೆಸಬಹುದು.

ಶಿಮ್ಲಾ: ಸ್ವರ್ಗವೇ ಧರೆಗಿಳಿದ ಅನುಭವ ನೀಡುವ ಮತ್ತೊಂದು ಸ್ಥಳ ಎಂದರೆ ಶಿಮ್ಲಾ. ಇಲ್ಲಿನ ಕಡಿದಾದ ರಸ್ತೆಯಲ್ಲಿ ಸಾಗುವ ಮಾರ್ಗ ಅದ್ಬುತ. ಇಲ್ಲಿನ ಹನುಮಾನ್​ ದೇಗುಲ ಪ್ರವಾಸಿಗರ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಇದರ ಜೊತೆಗೆ ಬ್ರಿಟಿಷರ ಆಳ್ವಿಕೆಯ ವೈಸೆರೆಗಲ್​ ಲಾಡ್ಜ್​ ಕೂಡ ಎಲ್ಲರನ್ನು ಸೆಳೆಯುತ್ತದೆ. ಹೀಗಾಗಿ ಈ ಸ್ಥಳವನ್ನು ಒಮ್ಮೆ ನೋಡಿ ಬರಬಹುದು.

ಮೌಂಟ್​ ಅಬು: ಪಶ್ಚಿಮ ರಾಜಸ್ಥಾನದ ಪ್ರಮುಖ ಸ್ಥಳ ಎಂದರೆ ಅದು ಮೌಂಟು ಅಬು, ನಕ್ಕು ಸರೋವರದ ಇಲ್ಲಿನ ಆರ್ಕಷಣಿಯ ತಾಣ. ಸೂರ್ಯಾಸ್ತದ ಸೊಬಗಿನ ಜೊತೆಗೆ ಜಲಪಾತಗಳ ಸೌಂದರ್ಯಗಳನ್ನು ಸವಿಯಬಹುದು. ರಾಜಸ್ಥಾನದ ಪ್ರಮುಖ ಗಿರಿಧಾಮ ಇದಾಗಿದ್ದು, ಇಲ್ಲಿನ ದೇವಾಲಯಗಳ ವಾಸ್ತುಶಿಲ್ಪಗಳು ಕೂಡ ಪ್ರವಾಸಿಗರನ್ನು ಸೆಳೆಯುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲೂ ಮುಖದ ಅಂದ ಕಾಪಾಡಲು ಈ ಐದು ವಸ್ತು ಬಳಸಿ

ABOUT THE AUTHOR

...view details