ಕರ್ನಾಟಕ

karnataka

ETV Bharat / sukhibhava

ವರ್ಲ್ಡ್​ ರೋಸ್​ ಡೇ: ಕ್ಯಾನ್ಸರ್​ ವಿರುದ್ಧ ಹೋರಾಡಿದ ಮಿಲಿಂಡಾ ರೋಸ್​ಗೆ ಈ ದಿನ ಅರ್ಪಣೆ - ಗೆದ್ದವರ ಯಶೋ ಸಂಭ್ರಮವನ್ನು

ಕ್ಯಾನ್ಸರ್ ವಿರುದ್ಧ ಗೆದ್ದವರ ಯಶೋಗಾಥೆಯನ್ನು ಸಂಭ್ರಮಿಸುವುದು ವಿಶ್ವ ಗುಲಾಬಿ ದಿನದ ಮಹತ್ವದ ಅಂಶ.

Milinda Rose who fought cancer spread positivity in victims
Milinda Rose who fought cancer spread positivity in victims

By ETV Bharat Karnataka Team

Published : Sep 22, 2023, 2:19 PM IST

ಬೆಂಗಳೂರು: ಸೆಪ್ಟೆಂಬರ್​ 22 ಅನ್ನು ವಿಶ್ವ ರೋಸ್​ ದಿನವನ್ನಾಗಿ ಆಚರಿಸಲಾಗುವುದು. ಈ ದಿನದ ಉದ್ದೇಶ ಕ್ಯಾನ್ಸರ್​ ವಿರುದ್ದ ಹೋರಾಡುತ್ತಿರುವವರಲ್ಲಿ ಜೀವನೋತ್ಸಹ ತುಂಬುವುದಾಗಿದೆ. ಕ್ಯಾನ್ಸರ್​ ವಿರುದ್ದ ಹೋರಾಡುವವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡುವ ಜೊತೆಗೆ ಅವರಲ್ಲಿ ಹೊಸ ಭರವಸೆ ಮತ್ತು ಸಂತಸ ಮೂಡಿಸುವುದಾಗಿದೆ. ಈ ಮೂಲಕ ಅವರು ತಮ್ಮ ಕ್ಯಾನ್ಸರ್​ ವಿರುದ್ಧ ಹೋರಾಟದಲ್ಲಿ ಸಕಾರಾತ್ಮಕತೆ ಕಂಡು ಜಯಗಳಿಸಲಿ ಎಂಬುದಾಗಿದೆ.

ಇತಿಹಾಸ: ವಿಶ್ವ ಗುಲಾಬಿ ದಿನದ ಹಿಂದೆ ಮೆಲಿಂಡಾ ರೋಸ್​ ಎಂಬ ಕ್ಯಾನ್ಸರ್​ ಸಂತ್ರಸ್ತೆಯ ಯಶೋಗಾಥೆ ಇದೆ. 12 ವರ್ಷದ ಕೆನಾಡಾದ ಕ್ಯಾನ್ಸರ್​ ಪೀಡಿತ ಈ ಮಗು ಧೈರ್ಯಶಾಲಿಯಾಗಿದ್ದಳು. 1994ರಲ್ಲಿ ಆಕೆಯಲ್ಲಿ ಅಪರೂಪದ ರಕ್ತದ ಕ್ಯಾನ್ಸರ್​ ಆದ ಅಸ್ಕಿನ್​​ ಟ್ಯೂಮರ್​ ಪತ್ತೆಯಾಯಿತು. ಈ ವೇಳೆ ಆಕೆಗೆ ಜೀವನ ಕಳೆಯಲು ಉಳಿದಿರುವುದು ಕೇವಲ ಎಣಿಕೆಯಷ್ಟೇ ದಿನಗಳು ಎಂದು ವೈದ್ಯರು ತಿಳಿಸಿದ್ದರು.

ಆದರೆ ಇದರಿಂದ ಧೃತಿಗೆಡದ ಮಿಲಿಂಡಾ ತನ್ನೆಲ್ಲಾ ನೋವು ಮರೆತು ಆರು ತಿಂಗಳ ಕಾಲ ಸಂತಸ ಮತ್ತು ಸಂತೃಪ್ತಿಯಿಂದ ಕಾಲ ಕಳೆದಳು. ಆಕೆಯ ಈ ಉತ್ಸಾಹ ಮತ್ತು ನಿರ್ಣಯ ಕೇವಲ ಕ್ಯಾನ್ಸರ್​ ಪೀಡಿತರಿಗೆ ಮಾತ್ರವಲ್ಲ, ಆಕೆಯ ಸುತ್ತಲೂ ಇದ್ದ ಎಲ್ಲರಿಗೂ ಪ್ರಭಾವ ಬೀರಿತು.

ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಆಕೆ ಸಕಾರಾತ್ಮಕವಾಗಿದ್ದು, ಆಕೆಯ ಸುತ್ತಲಿನ ಕ್ಯಾನ್ಸರ್​ ಸಂತ್ರಸ್ತರ ಮುಖದಲ್ಲೂ ನಗು ಮತ್ತು ಸಕಾರಾತ್ಮತೆ ತಂದಳು. ತನ್ನ ವಿರಾಮದ ಸಮಯದಲ್ಲಿ ಸ್ಪೂರ್ತಿದಾಯಕ ಪತ್ರ, ಇಮೇಲ್​ ಮತ್ತು ಕವಿತೆಗಳನ್ನು ಬರೆಯುವ ಮೂಲಕ ತನ್ನಂತೆ ಹೋರಾಡುತ್ತಿರುವವರಲ್ಲಿ ಹೊಸ ಆಶಾಕಿರಣ ಮತ್ತು ನಗುವನ್ನು ತರಿಸಿದಳು. ಮಿಲಿಂಡಾ ಬದುಕಿನ ಕಡೇಯ ಆರು ತಿಂಗಳನ್ನು ಬೇರೆಯವರಿಗೆ ಸಹಾಯ ಮಾಡಲು ಮುಡಿಪಾಗಿಟ್ಟು, ಆದರ್ಶ ಮೆರೆದಳು. ಇತರೆ ಕ್ಯಾನ್ಸರ್​ ಸಂತ್ರಸ್ತರಲ್ಲಿ ಭರವಸೆಯ ಕಿರಣವಾದಳು

ಯಾಕೆ ರೋಸ್​?: ಗುಲಾಬಿ ಎಂಬುದು ಪ್ರೀತಿ, ಕರುಣೆ ಮತ್ತು ಶಕ್ತಿ, ಕ್ಯಾನ್ಸರ್ ಪೀಡಿತರಲ್ಲಿ ಬೆಂಬಲ ಮತ್ತು ಸಹಾನುಭೂತಿಯನ್ನು ಸೂಚಿಸುತ್ತದೆ. ವರ್ಲ್ಡ್​ ರೋಸ್​ ದಿನದಂದು ಕ್ಯಾನ್ಸರ್​ ಸಂತ್ರಸ್ತರು ಗುಲಾಬಿ ಹೂವಿನ ಮೂಲಕ ಪ್ರತಿನಿಧಿಸುವ ಮೂಲಕ ತಮ್ಮ ಹೋರಾಟದ ಹಾದಿಗಳನ್ನು ಪ್ರತಿ ಬಿಂಬಿಸುತ್ತಾರೆ.

ವಿಶ್ವ ರೋಸ್​ ದಿನದಂದು ಕ್ಯಾನ್ಸರ್​ ವಿರುದ್ಧ ಹೋರಾಡುತ್ತಿರುವವರಲ್ಲಿ ಒಂದು ಭರವಸೆ ಮತ್ತು ಬೆಂಬಲವನ್ನು ಮೂಡಿಸುವ ಪ್ರಯತ್ನ ನಡೆಸಲಾಗುವುದು. ಈ ದಿನವನ್ನು ಪ್ರೀತಿ ಮತ್ತು ಕಾಳಜಿಯ ಜೊತೆಗೆ ಸಹಾನುಭೂತಿ ಮತ್ತು ಪ್ರೇರಣೆಯೊಂದಿಗೆ ಆಚರಿಸಲಾಗುತ್ತದೆ.

ಬೇಕಿದೆ ಸಂತ್ರಸ್ತರಿಗೆ ಮತ್ತಷ್ಟು ಬೆಂಬಲ: ಕ್ಯಾನ್ಸರ್​ ವಿರುದ್ಧದ ಹೋರಾಟದಲ್ಲಿ ಭಾವಾನಾತ್ಮಕ ಬೆಂಬಲ ಪ್ರಮುಖ. ಈ ಸವಾಲಿನ ಸಮಯದಲ್ಲಿ ನಮ್ಮ ಪ್ರೀತಿಪಾತ್ರರಿಗೆ ಭಾವನಾತ್ಮಕ ಬೆಂಬಲ ಅತ್ಯವಶ್ಯಕವಾಗಿದ್ದು, ಇದು ಅವರ ಹೋರಾಟಕ್ಕೆ ಸಹಾಯ ಮಾಡುತ್ತದೆ.

ಅನೇಕ ಬಾರಿ ಕ್ಯಾನ್ಸರ್​ ಸಂತ್ರಸ್ತರ ದೈಹಿಕ ಚಿಕಿತ್ಸೆ ವಿಚಾರದಲ್ಲಿ ಯೋಚಿಸುವ ನಾವು ಮಾನಸಿಕ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತೇವೆ. ಈ ವೇಳೆ ಅವರಿಗೆ ಸಾಕಾರಾತ್ಮಕವಾದ ಬೆಂಬಲ ಮತ್ತು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವುದು ಕೂಡ ಮುಖ್ಯ.

ಇದನ್ನೂ ಓದಿ: ಆತಂಕ ಮೂಡಿಸುತ್ತಿರುವ ಹೃದಯಾಘಾತ ಪ್ರಕರಣ; ಒಂದೇ ದಿನದಲ್ಲಿ ನಾಲ್ವರು ಯುವಕರ ಸಾವು

ABOUT THE AUTHOR

...view details