ಕರ್ನಾಟಕ

karnataka

ETV Bharat / sukhibhava

ಸ್ವರ್ಣ ನದಿಗೆ ಸೇರುತ್ತಿರುವ ಖನಿಜಾಂಶ, ಮಣಿಪಾಲದ ಮಕ್ಕಳಲ್ಲಿ ಮೀತಿ ಮೀರಿದ ಸೀಸದ ಅಂಶ ಪತ್ತೆ; ಅಧ್ಯಯನ - ಕರ್ನಾಟಕದ ಮಣಿಪಾಲದ ಮಕ್ಕಳು

ಉಡುಪಿ ಜಿಲ್ಲೆಯ ಮಣಿಪಾಲ ನಗರದ ಮಕ್ಕಳಲ್ಲಿ ಸೀಸದ ಪ್ರತಿ ಡೆಸಿಲೀಟರ್​ಗೆ 30.2 ಮೈಕ್ರೋಗ್ರಾಂನಷ್ಟು ಕಂಡು ಬಂದಿದೆ.

Manipal city children exposed highest level of lead content
Manipal city children exposed highest level of lead content

By ETV Bharat Karnataka Team

Published : Nov 21, 2023, 3:48 PM IST

ಲಖನೌ(ಉತ್ತರಪ್ರದೇಶ): ಕೇಂದ್ರಿಯ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುವಂತಹ ವಿಷಕಾರಕ ಮಟ್ಟದಲ್ಲಿ ಸೀಸದ ಪ್ರಮಾಣಕ್ಕೆ ಮಣಿಪಾಲದ ಮಕ್ಕಳು ಒಡ್ಡಿಕೊಳ್ಳುತ್ತಿದ್ದಾರೆ ಕಿಂಗ್​ ಜಾರ್ಜ್​ ಮೆಡಿಕಲ್​ ಯುನಿವರ್ಸಿಟಿ ಸಂಶೋಧಕರ ಅಧ್ಯಯನದಲ್ಲಿ ಬಯಲಾಗಿದೆ.

ಭಾರತದ 10 ಜಿಲ್ಲೆಗಳ 60 ನಗರದ ಶಾಲೆಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ. 6 ರಿಂದ 16ವರ್ಷದ 2,247 ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನದಲ್ಲಿ ಲಖನೌ ಮಕ್ಕಳ ರಕ್ತದ ಸೀಸದ ಮಟ್ಟ ಪ್ರತಿ ಡೆಸಿಲಿಟ್ರೆಗೆ 19.2 ಮೈಕ್ರೋಗ್ರಾಂನಷ್ಟು ಕಂಡು ಬಂದಿದೆ.

ಇನ್ನು ಕರ್ನಾಟಕದ ಉಡುಪಿ ಜಿಲ್ಲೆಯ ಮಣಿಪಾಲ ನಗರದ ಮಕ್ಕಳಲ್ಲಿ ಸೀಸದ ಪ್ರಮಾಣ ಪ್ರತಿ ಡೆಸಿಲೀಟರ್​ಗೆ 30.2 ಮೈಕ್ರೋಗ್ರಾಂನಷ್ಟು ಕಂಡು ಬಂದಿದೆ. ರೋಗ ನಿಯಂತ್ರಣ ಪ್ರಕಾರ ಪ್ರತಿ ವ್ಯಕ್ತಿಯಲ್ಲಿ ರಕ್ತದ ಸೀಸದ ಮಟ್ಟ ಪ್ರತಿ ಡೆಸಿಲೀಟರ್​ಗೆ 5 ಮೈಕ್ರೋಗ್ರಾಂನಷ್ಟು ಮಿತಿಯನ್ನು ನೀಡಲಾಗಿದೆ. ಆದರೆ, ಈ ಮಕ್ಕಳಲ್ಲಿ ಮಿತಿ ಮೀರಿದ ಮಟ್ಟಕ್ಕಿಂತ ನಾಲ್ಕು ಐದು ಪಟ್ಟು ಸೀಸದ ಅಂಶ ಪತ್ತೆಯಾಗಿದೆ.

ಈ ಅಧ್ಯಯನವನ್ನು ಇಂಡಿಯನ್​ ಜರ್ನಲ್​ ಆಫ್​​ ಪಿಡಿಯಾಟ್ರಿನ್ಸ್​​ನಲ್ಲಿ ಪ್ರಕಟಿಸಲಾಗಿದೆ. ಏಪ್ರಿಲ್​ 2019ರಿಂದ ಫೆಬ್ರವರಿ 2020ರವರೆಗೆ ಈ ಅಧ್ಯಯನ ನಡೆಸಲಾಗಿದೆ. ಉಳಿದಂತೆ ಎಂಟಿ ಜಿಲ್ಲೆಗಳಲ್ಲಿ ಶಿಫಾರಸು ಮಿತಿಗಿಂತ ಅಧಿಕ ಪ್ರಕರಣದಲ್ಲಿ ಕಂಡು ಬಂದಿದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯ ರಕ್ಷಣ ಮಾಡುವ ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ ಎಂದು ಕೆಜಿಎಂಯುನ ಅಧ್ಯಯನದ ಪ್ರಮುಖ ಸಂಶೋಧಕಿ ಪ್ರೊ ಶಲ್ಲೆ ಅವಸ್ಥಿ ತಿಳಿಸಿದ್ದಾರೆ.

ಸೀಸದ ಲೋಹವನ್ನು ಕೈಗಾರಿಕೆಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದ್ದು, ಮಕ್ಕಳು ಮತ್ತು ಹದಿವಯಸ್ಸಿನವರಲ್ಲಿ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಕಾರಣ ಇದು ಅವರ ದೇಹದಲ್ಲಿ ಸುಲಭವಾಗಿ ಹೀರಿಕೊಳ್ಳಬಹುದಾಗಿದ್ದು, ಅನೇಕ ಆರೋಗ್ಯ ಪರಿಣಾಮಕ್ಕೆ ಕಾರಣವಾಗುತ್ತದೆ. ಅದರಲ್ಲೂ ಕೇಂದ್ರ ನರ ವ್ಯವಸ್ಥೆ ಮೇಲಿನ ಪರಿಣಾಮ ಹೆಚ್ಚಿದೆ. ಈ ಸೀಸವೂ ಎನಮೆಲ್​ ಪೈಂಟ್ಸ್​ನಿಂದ ಬಣ್ಣದ ಮೂರ್ತಿ ಮತ್ತು ಆಟಿಕೆಗಳಲ್ಲಿ ಕಂಡು ಬಂದಿದ್ದು, ಇದು ಅದರ ಮೂಲವಾಗಿರಬಹುದು.

ಸ್ವರ್ಣ ನದಿಯಲ್ಲಿ ಖನಿಜಾಂಶ: ಮಣಿಪಾಲದ ಮಕ್ಕಳಲ್ಲಿ ಸ್ವರ್ಣ ನದಿಯು ಸೀಸದಿಂದ ಹೆಚ್ಚು ಕಲುಷಿತವಾಗಿದ್ದು, ಇದು ಇಲ್ಲಿನ ಕುಡಿಯು ನೀರಿನ ಪ್ರಮುಖ ಮೂಲವಾಗಿದೆ. ಜೊತೆಗೆ ಜಿಲ್ಲೆಯ 2012ರಿಂದ ಕಲ್ಲಿದ್ದಲು ಆಧಾರಿತ ಶಕ್ತಿ ಸ್ಥಾಪಕ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಇದರಿಂದ ನೀರು ಕಲುಷಿತಗೊಂಡಿದೆ ಎಂದು ಅವಸ್ಥಿ ತಿಳಿಸಿದ್ದಾರೆ.

ಅದೇ ರೀತಿ ಜೋಧ್​ಪುರದಲ್ಲಿ ಜೊಜರಿ ನದಿಯಲ್ಲಿ ಸೀಸದ ಅಂಶ ಪತ್ತೆಯಾಗಿದೆ. ಸೀಸಕ್ಕೆ ಮಕ್ಕಳು ಹೆಚ್ಚು ಒಡ್ಡಿ ಕೊಳ್ಳುವುದರಿಂದ ಅವರಲ್ಲಿ ಆತಂಕ, ಖಿನ್ನತೆ, ಕ್ರೋಧ, ಹೆಚ್ಚಿನ ಕ್ರಿಯಾಶೀಲತೆ, ಕಿರಿಕಿರಿ ಮನೋಭವದಂತಹ ಅನೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಭಾರತದಲ್ಲಿ ಸೀಸದೊಂದಿಗೆ ಪೆಟ್ರೋಲ್ ಅನ್ನು ನಿಲ್ಲಿಸಿದ ಹೊರತಾಗಿಯೂ, ಕೈಗಾರಿಕೆಗಳು ಪರಿಸರ ಸೀಸದ ಮಾಲಿನ್ಯದ ಪ್ರಮುಖ ಮೂಲವಾಗಿಯೇ ಉಳಿದುಕೊಂಡಿದೆ ಎಂದು ಎರಡನೇ ಸಂಶೋಧನೆ ಪ್ರಮುಖ ಲೇಖಕ ಡಾ ದಿವಸ್​ ಕುಮಾರ್​ ತಿಳಿಸಿದ್ದಾರೆ.

ಕಡಿಮೆ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಹೊಂದಿರುವ ಕುಟುಂಬದ ಮಕ್ಕಳು ಅಧಿಕ ಪ್ರಮಾಣದ ಸೀಸಗೆ ಒಡ್ಡಿಕೊಳ್ಳುತ್ತಿದ್ದಾರೆ. ಕಡಿಮೆ ಸಾಮಾಜಿಕ ಆರ್ಥಿಕ ಹಿನ್ನೆಲೆ ಹೊಂದಿರುವ ಮಕ್ಕಳು ಶಿಫಾರಸ್ಸಿನ ಮಿತಿ ಮೀರಿ ನಾಲ್ಕೈದು ಪಟ್ಟು ಹೆಚ್ಚಿನ ಸೀಸಕ್ಕೆ ಅವರು ಒಳಗಾಗುತ್ತಿದ್ದಾರೆ ಎಂಬುದು ಅಧ್ಯಯನದಲ್ಲಿ ಪತ್ತೆಯಾಗಿದೆ.

ಪೋಷಕರಿಗೆ ಶಿಕ್ಷಣದ ಕೊರತೆ, ಕಡಿಮೆ ಕುಟುಂಬದ ಆದಾಯಗಳು ಕೂಡ ರಕ್ತದಲ್ಲಿನ ಸೀಸದ ಮಟ್ಟದೊಂದಿಗೆ ಸಂಬಂಧ ಹೊಂದಿದೆ ಎಂದು ಈ ಹೊಂದಿನ ಅಧ್ಯಯನಗಳು ವರದಿ ಮಾಡಿದೆ. ಇದಕ್ಕೆ ಪ್ರಮುಖ ಕಾರಣ ಜಾಗೃತೆಯ ಕೊರತೆ, ಪೋಷಕರಿಗೆ ಕಡಿಮೆ ಶಿಕ್ಷಣ, ಪರಿಸರದಲ್ಲಿನ ಸೀಸದ ಅಂಶಕ್ಕೆ ಒಳಗಾಗುವುದರಿಂದ ಆಗುವ ಆರೋಗ್ಯ ಸಮಸ್ಯೆ ಕುರಿತು ಅರಿವು ಇಲ್ಲದಿರುವುದೇ ಇಷ್ಟಕ್ಕೆಲ್ಲ ಕಾರಣ ಎಂದು ಪ್ರೋ ಅವಸ್ಥಿ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಕ್ಕಳ ಮಿದುಳಿನ ಮೇಲೆ ಟೆಕ್​ ಸಾಧನಗಳ ಪರಿಣಾಮವೇನು?: ಅಧ್ಯಯನದಲ್ಲಿ ಕುತೂಹಲದ ಮಾಹಿತಿ ಬಹಿರಂಗ

ABOUT THE AUTHOR

...view details