ಕರ್ನಾಟಕ

karnataka

ETV Bharat / sukhibhava

ಕೇರಳದಲ್ಲಿ ಪತ್ತೆಯಾಯ್ತು ಕೋವಿಡ್​​ ವಂಶಾವಳಿ JN 1: ಆತಂಕ ಬೇಡ, ಇರಲಿ ಮುನ್ನೆಚ್ಚರಿಕೆ ಎಂದ ತಜ್ಞರು

ಜೆಎನ್​1 ಎಂಬುದು ಬಿಎ.2.68 ಓಮ್ರಿಕಾನ್​ ತಳಿಯ ವಂಶಾವಳಿಯಾಗಿದ್ದು, ಮೊದಲ ಬಾರಿಗೆ ಆಗಸ್ಟ್​ನಲ್ಲಿ ಲಕ್ಸಂಬರ್ಗ್​​ನಲ್ಲಿ ಕಂಡು ಬಂದಿತ್ತು.

By ETV Bharat Karnataka Team

Published : Dec 15, 2023, 1:18 PM IST

Updated : Dec 16, 2023, 9:57 PM IST

Kerala detecting the JN 1 a sub-variant of Omicron
Kerala detecting the JN 1 a sub-variant of Omicron

ನವದೆಹಲಿ: ಕೇರಳದಲ್ಲಿ ಓಮ್ರಿಕಾನ್​ನ ಉಪ ತಳಿಯಾದ ಜೆಎನ್​ 1 ಪತ್ತೆಯಾಗಿದೆ. ಇದು ಹೊಸ ಕೋವಿಡ್​ ಪ್ರಕರಣಕ್ಕೆ ಕಾರಣವಾಗಲಿದ್ಯಾ ಎಂಬ ಆತಂಕ ಮೂಡಿದೆ. ಆದರೆ, ಈ ಕುರಿತು ಮಾತನಾಡಿರುವ ತಜ್ಞರು ಯಾವುದೇ ಭಯ ಬೇಡ. ಆದರೆ, ಈ ತಳಿ ಬಗ್ಗೆ ನಿರಂತರ ಗಮನ ಇರಲಿ ಎಂದಿದ್ದಾರೆ.

ಭಾರತೀಯ ಸಾರ್ಸ್​​​- ಕೋವ್​-2 ಜಿನೋಮಿಕ್​ ಕಾನ್​ಸೊರ್ಟಿಯಂ (ಐಎನ್​ಎಸ್​ಸಿಒಜಿ)ಯ ಇತ್ತೀಚಿನ ಹೊಸ ದತ್ತಾಂಶದಲ್ಲಿ ಕೇರಳದ ಮಹಿಳೆಯೊಬ್ಬರಲ್ಲಿ ಕೋವಿಡ್-‌19 ಉಪತಳಿಯಾದ ಜೆಎನ್‌.1 ತಳಿ ಇರುವಿಕೆ ದೃಢಪಟ್ಟಿದೆ. ನವೆಂಬರ್ 18 ರಂದು ತಿರುವನಂತಪುರಂನ 79 ವರ್ಷದ ಮಹಿಳೆಯ ಗಂಟಲು ಮಾದರಿಯನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಹೊಸ ಉಪತಳಿಯ ಸೋಂಕಿರುವುದು ಪತ್ತೆಯಾಗಿದೆ. ಅವರಲ್ಲಿ influenza-like illnesses (ILI- ಇನ್ಫ್ಲುಯೆನ್ಝಾ ತರಹದ ಕಾಯಿಲೆ) ಸೌಮ್ಯ ಲಕ್ಷಣ ಕಂಡುಬಂದಿದೆ. ಸದ್ಯ ಕೋವಿಡ್-19 ನಿಂದ ಅವರು ಚೇತರಿಸಿಕೊಂಡಿದ್ದಾರೆ. ರೋಗದ ಲಕ್ಷಣಗಳು ಸೌಮ್ಯವಾಗಿದ್ದು ರೋಗಿಗಳು ಯಾವುದೇ ಚಿಕಿತ್ಸೆ ಇಲ್ಲದೆ ತಮ್ಮ ಮನೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಮಹಾನಿರ್ದೇಶಕ ಡಾ ರಾಜೀವ್ ಬಹ್ಲ್ ಹೇಳಿದ್ದಾರೆ.

ಜೆಎನ್​1 ಎಂಬುದು ಬಿಎ.2.68 ಓಮ್ರಿಕಾನ್​ ತಳಿಯ ವಂಶಾವಳಿಯಾಗಿದ್ದು, ಮೊದಲ ಬಾರಿಗೆ ಆಗಸ್ಟ್​ನಲ್ಲಿ ಲಕ್ಸಂಬರ್ಗ್​​ನಲ್ಲಿ ಕಂಡು ಬಂದಿತು. ಬಿಎ.2.86 ಎಂಬುದನ್ನು ಪಿರೋಲಾ ತಳಿಯಿಂದಲೂ ಪರಿಚಿತವಾಗಿದ್ದು, ಇದು ಮೊದಲಿಗೆ ಜುಲೈನಲ್ಲಿ ಡೆನ್ಮಾರ್ಕ್​ನಲ್ಲಿ ಪತ್ತೆಯಾಯಿತು.

ನವೆಂಬರ್​ನಲ್ಲಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಯುಎಸ್​ಸಿಡಿಸಿ) ಜೆಎನ್​ ರೋಗ ನಿರೋಧಕ ಶಕ್ತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿತು. ಜೆಎನ್​ ಎಂಬುದು ಬಿಎ.2.86 ವಂಶಾವಳಿ ಆಗಿದ್ದು, ಎಲ್​455ಎಸ್​ ರೂಪಾಂತರವಾಗಿದೆ. ಇದು ಪ್ರತಿರಕ್ಷಣ ವ್ಯವಸ್ಥೆ ತಪ್ಪಿಸುವ ಗುಣಲಕ್ಷಣ ಹೊಂದಿದೆ.

ಹೊಸ ತಳಿ ಅಲ್ಲ: ಜೆಎನ್​ 1 ಎಂಬುದು ಹೊಸ ತಳಿಯಲ್ಲ. ಆದರೆ, ಇದು ಭಾರತಕ್ಕೆ ಹೊಸದಾಗಿದೆ. ಇದು ಈಗಾಗಲೇ ಜಾಗತಿಕವಾಗಿ 38 ದೇಶದಲ್ಲಿ ಅಸ್ತಿತ್ವ ಹೊಂದಿದೆ. ಯುಕೆ. ಪೋರ್ಚುಗಲ್​ ಮತ್ತು ಇತರ ದೇಶದಲ್ಲಿ ಇದನ್ನು ಕಾಣಬಹುದಾಗಿದೆ ಎಂದು ಸೋಂಕು ರೋಗ ತಜ್ಞ ಡಾ ಈಶ್ವರ್​ ಗಿಲ್ಡ ತಿಳಿಸಿದ್ದಾರೆ.

ಈ ತಳಿಯು ಶ್ವಾಸಕೋಶದ ಮೇಲೆ ಕೆಲವು ಪರಿಣಾಮ ಹೊಂದಿದೆ. ಅಂದರೆ, ಮೂಗು ಸೋರುವಿಕೆ, ಕೆಮ್ಮು, ಚಳಿ ಮತ್ತು ಕೆಲವು ಬಾರಿ ಉಸಿರಾಟದ ಏರಿಳಿತಕ್ಕೆ ಕಾರಣವಾಗಬಹುದು. ಆದರೆ, ಇಲ್ಲಿಯವರೆಗೆ ಇದಕ್ಕೆ ಆಮ್ಲಜನಕದ ಅವಶ್ಯಕತೆ, ಐಸಿಯು ಬೆಡ್​​, ವೆಂಟಿಲೇಟರ್​ ಬೇಕು ಎಂಬ ಪರಿಸ್ಥಿತಿ ಉಂಟಾಗಿಲ್ಲ. ಇದರಿಂದ ಸಾವು ಕೂಡ ಸಂಭವಿಸಿಲ್ಲ. ಈ ಹಿನ್ನೆಲೆಯಲ್ಲಿ ಇದರ ಬಗ್ಗೆ ಹೆಚ್ಚಿನ ಆತಂಕ ಬೇಡ ಎಂದಿದ್ದಾರೆ.

ದೇಶದಲ್ಲಿನ ಕೊರೋನಾ ಕುರಿತು ಗುರುವಾರ ಸಂಜೆ ಆರೋಗ್ಯ ಸಚಿವಾಲಯದ ವರದಿಯಂತೆ, ದೇಶದಲ್ಲಿ 1,185 ಹೊಸ ಕೊರೋನಾ ವೈರಸ್​ ಸೋಂಕು ಪತ್ತೆಯಾಗಿದ್ದು, ಕೇರಳದಲ್ಲಿ ಅತಿ ಹೆಚ್ಚು 1,039 ಪ್ರಕರಣ ದಾಖಲಾಗಿದೆ. ದಕ್ಷಿಣ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ. ಕಳೆದೊಂದು ತಿಂಗಳ ಹಿಂದೆ ಕೇರಳದಲ್ಲಿ 33 ಇದ್ದ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದೆ.

ಜೆಎನ್​ 1 ಲಕ್ಷಣ: ಕೆಮ್ಮು, ಜ್ವರ, ನೆಗಡಿ, ಸುಸ್ತು, ಮೂಗು ಕಟ್ಟುವಿಕೆ, ಮೂಗು ಸೋರುವಿಕೆ, ಅತಿಸಾರ ಮತ್ತು ತಲೆ ನೋವು ಇದರ ಲಕ್ಷಣಗಳಾಗಿವೆ ಎಂದು ಕೊಚ್ಚಿನ ಅಮೃತ ಆಸ್ಪತ್ರೆಯ ಅಸಿಸ್ಟೆಂಟ್​ ಪ್ರೊಫೆಸರ್​ ಡಾ ಡಿಪು ತಿಳಿಸಿದ್ದಾರೆ.

ಭಾರತದಲ್ಲಿ ಈ ತಳಿಯ ಬಗ್ಗೆ ಆತಂಕ ಬೇಡ. ಆದರೆ, ವೈಜ್ಞಾನಿಕ ಸಮುದಾಯದಲ್ಲಿ ಇದರ ಮೇಲ್ವಿಚಾರಣೆ ಬೇಕಿದೆ ಹೊರತು ಸಾಮಾನ್ಯ ಸಾರ್ವಜನಿಕರಲ್ಲಿ ಅಲ್ಲ ಎಂದಿದ್ದಾರೆ ಡಾ ಗಿಲ್ಡ್​​. (ಐಎಎನ್​ಎಸ್​)

ಇದನ್ನೂ ಓದಿ: ಕೋವಿಡ್​ನಿಂದ ಚೇತರಿಕೆ ಕಂಡರೂ 2ವರ್ಷಗಳ ಕಾಲ ಶ್ವಾಸಕೋಶದಲ್ಲೇ ಇರುತ್ತೆ ಸೋಂಕು; ಅಧ್ಯಯನ

Last Updated : Dec 16, 2023, 9:57 PM IST

ABOUT THE AUTHOR

...view details