ಕರ್ನಾಟಕ

karnataka

By

Published : Apr 27, 2023, 12:27 PM IST

ETV Bharat / sukhibhava

ಏಮ್ಸ್​ಗಳಲ್ಲಿ ಪ್ರಾರಂಭವಾಗಲಿದೆ ಹೋಮಿಯೋಪತಿ - ಆಯುರ್ವೇದ ಒಪಿಡಿಗಳು

ಹೋಮಿಯೋಪತಿ ಮತ್ತು ಆಯುರ್ವೇದ ಚಿಕಿತ್ಸೆಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಕೇಂದ್ರ ಆಯುಷ್​ ಸಚಿವರು ತಿಳಿಸಿದ್ದಾರೆ.

homeopathic-ayurvedic-opds-to-start-in-aiims
homeopathic-ayurvedic-opds-to-start-in-aiims

ಬೆಂಗಳೂರು:ದೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​​)ಗಳಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಒಪಿಡಿ ಮತ್ತು ಐಪಿಡಿಗಳನ್ನು ತೆರೆಯುವ ಸಂಬಂಧ ಕೇಂದ್ರ ಆಯುಷ್​ ಸಚಿವಾಲಯ ಸಿದ್ದತೆ ನಡೆಸಿದೆ. ಈಗಾಗಲೇ ಇರುವ ಏಮ್ಸ್​ಗಳಲ್ಲಿ ಮತ್ತು ಭವಿಷ್ಯದಲ್ಲಿ ಕಾರ್ಯ ನಿರ್ವಹಿಸುವ ಏಮ್ಸ್​​ಗಳಲ್ಲಿ ಇದೂ ಇರಲಿದೆ ಎಂದು ಕೇಂದ್ರ ಆಯುಷ್​ ಸಚಿವ ಮಹೇಂದ್ರ ಮುಂಜಾಪರ ತಿಳಿಸಿದ್ದಾರೆ.

ಹೋಮಿಯೋಪತಿ- ಆಯುರ್ವೇದ ಚಿಕಿತ್ಸೆ

ವಿಶ್ವ ಯೋಗದಿನದ ಹಿನ್ನೆಲೆ 100 ದಿನದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಇದರ ಕುರಿತು ವಿವರಣೆ ನೀಡಿದ ಅವರು, ಜಗತ್ತಿನೆಲ್ಲೆಡೆ ಆಯುರ್ವೇದ ಚಿಕಿತ್ಸೆ ಕುರಿತು ಬೇಡಿಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಆಯುರ್ವೇದ ಮತ್ತು ಹೋಮಿಯೋಪತಿ ಚಿಕಿತ್ಸೆಗೆ ಉತ್ತೇಜನ ನೀಡಲು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದಕ್ಕಾಗಿ ಹೊಸ ಸಚಿವಾಲಯ ಸೃಷ್ಟಿಸಿದ್ದು, ಪ್ರತ್ಯೇಕ ಬಜೆಟ್ ಸಹ ನೀಡಿದೆ.

ಹೋಮಿಯೋಪತಿ- ಆಯುರ್ವೇದ ಚಿಕಿತ್ಸೆ

ಇದೀಗ ಕೇಂದ್ರ ಸರ್ಕಾರ ಏಮ್ಸ್​ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಆಲೋಪತಿ ಜೊತೆಯಲ್ಲಿಯೇ ಈ ಆಯುರ್ವೇದ ಮತ್ತು ಹೋಮಿಯೋಪತಿ ಒಪಿಡಿಗಳನ್ನು ನಡೆಸಲು ನಿರ್ಧರಿಸಿದೆ. ರೋಗಿಗಳು ತಮಗೆ ಬೇಕಾದ ಚಿಕಿತ್ಸೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಇದಕ್ಕಾಗಿ ದೇಶದ ಎಲ್ಲ ಏಮ್ಸ್​​ಗಳಲ್ಲಿ ಶೀಘ್ರದಲ್ಲೇ ಆಯುರ್ವೇದ ಮತ್ತು ಹೋಮಿಯೋಪತಿ ಒಪಿಸಿ ಮತ್ತು ಐಪಿಡಿ ಸೇವೆಗಳನ್ನು ಶುರು ಮಾಡಲು ನಿರ್ಧರಿಸಲಾಗುತ್ತದೆ.

100 ದಿನಗಳ ಕಾರ್ಯಕ್ರಮ: ಜೂನ್​ 21ರಂದು ವಿಶ್ವ ಯೋಗದಿನದ ಹಿನ್ನೆಲೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 100 ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ದೆಹಲಿಯ ತಲ್ಕಟೊರಾ ಒಳಾಂಗಣ ಸ್ಟೇಡಿಯಂನಲ್ಲಿ 100ನೇ ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ. 75ನೇ ದಿನದ ಕಾರ್ಯಕ್ರಮ ಅಸ್ಸೋಂ ದಿಬ್ರಾಂಗ್​ನಲ್ಲಿ ನಡೆಲಿದೆ. 50ನೇ ದಿನ ಕಾರ್ಯಕ್ರಮ ಮೇ 5ರಂದು ಜೈಪುರದಲ್ಲಿ ನಡೆಯಲಿದ್ದು, 20 ಸಾವಿರ ಜನರು ಏಕ ಕಾಲದಲ್ಲಿ ಯೋಗವನ್ನು ಪ್ರದರ್ಶನ ನಡೆಸಲಿದ್ದಾರೆ. ರಾಜಸ್ಥಾನದ ಎಲ್ಲ ಸಂಸದರು ಮತ್ತು ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಜೂನ್​ 21ರಂದು ಮಧ್ಯಪ್ರದೇಶದ ಉಜ್ಜೈಯನಿಯಲ್ಲಿ ನಡೆಯಲಿರುವ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದಾರೆ.

ಏನಿದು ಆಯುರ್ವೇದ ಚಿಕಿತ್ಸೆ: ಜಗತ್ತಿನ ಪುರಾತನ ಚಿಕಿತ್ಸೆ ವಿಧಾನ ಇದಾಗಿದ್ದು, ಭಾರತ ಮೂಲದ ಈ ಚಿಕಿತ್ಸಾ ವಿಧಾನ 3 ಸಾವಿರ ವರ್ಷದ ಇತಿಹಾಸವನ್ನು ಹೊಂದಿದ್ದು, ಪುರಾತನ ಭಾರತೀಯರು ಆರೋಗ್ಯ ಕಾಪಾಡಿಕೊಳ್ಳಲು ಇದನ್ನು ರೂಢಿಸಿಕೊಂಡಿದ್ದರು. ನೈಸರ್ಗಿಕವಾಗಿ ಲಭ್ಯವಿರುವ ಗಿಡಮೂಲಿಕೆಗಳನ್ನು ಆಧಾರಿಸಿ, ರೋಗಗಳಿಗೆ ಚಿಕಿತ್ಸೆಗಳನ್ನು ನೀಡಲಾಗುವುದು. ರಾಸಾಯನಿಯವಾಗಿ ತಯಾರಿಸಿದ ಈ ಔಷಧಿ ಅಡ್ಡಪರಿಣಾಮಗಳಿಂದ ಮುಕ್ತವಾಗಿದ್ದವು. ಇದರಲ್ಲಿ ಹಲವು ವಿಧಗಳಿವೆ.

ಹೋಮಿಯೋಪತಿ ಚಿಕಿತ್ಸೆ ಮಹತ್ವ: ಇದು ಕೂಡ ಆಯರ್ವೇದಂತೆ ನೈಸರ್ಗಿಕ ಚಿಕಿತ್ಸೆ ವಿಧಾನವಾಗಿದ್ದು, ಕೊಂಚ ಬದಲಾವಣೆ ಹೊಂದಿದೆ. ಹೋಮಿಯೋಪತಿಗೆ 200 ವರ್ಷದ ಇತಿಹಾಸವಿದ್ದು, ಇದು ತನ್ನ ಸಾಂಪ್ರದಾಯಿಕ ಔಷಧಕ್ಕೆ ನೈಸರ್ಗಿಕ ಮತ್ತು ಸಮಗ್ರ ಪರ್ಯಾಯವಾಗಿ ಜಾಗತಿಕವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ.

ಇದನ್ನೂ ಓದಿ:ವಿಶ್ವ ಹೋಮಿಯೋಪತಿ ದಿನ: ಸಾಂಪ್ರದಾಯಿಕ, ನೈಸರ್ಗಿಕ ಚಿಕಿತ್ಸೆ ಮಹತ್ವ ಇದು

ABOUT THE AUTHOR

...view details