ಕರ್ನಾಟಕ

karnataka

By

Published : Jun 5, 2023, 1:28 PM IST

ETV Bharat / sukhibhava

ಶೇ 13ರಷ್ಟು ಹೃದಯಾಘಾತಗಳು ಸಂಭವಿಸುವುದು ಸೋಮವಾರವೇ; ಕಾರಣ ಏನು?

ಹೃದಯಾಘಾತ ಇದೇ ಸಮಯದಲ್ಲಿ ಹೀಗೆ ಸಂಭವಿಸುತ್ತದೆ ಎಂದು ನಿಖರವಾಗಿ ಹೇಳಲು ಅಸಾಧ್ಯ. ಆದರೆ, ಕೆಲಸದ ಒತ್ತಡ, ನಿದ್ರೆ ಅವಧಿ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದೆ.

deadly-heart-attacks-13percent-more-likely-on-a-monday
deadly-heart-attacks-13percent-more-likely-on-a-monday

ಲಂಡನ್​: ಇಂದು ಹೃದಯಾಘಾತದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹೃದಯಾಘಾತ ಯಾವಾಗ, ಯಾರಿಗೆ ಸಂಭವಿಸುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ಈ ಸಂಬಂಧ ಇತ್ತೀಚೆಗೆ ನಡೆದ ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಅದರ ಅನುಸಾರ ಈ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಸೋಮವಾರ ಸಂಭವಿಸುತ್ತಿರುವುದು. ಶೇ. 13ರಷ್ಟು ಹೃದಯಾಘಾತ ಪ್ರಕರಣಗಳು ಉಳಿದ ದಿನಗಳಿಗಿಂತ ಕೆಲಸದ ವಾರದ ಮೊದಲ ದಿನವೇ ಸಂಭವಿಸುತ್ತಿವೆ.

ಬ್ರಿಟನ್​ನ ಮ್ಯಾಂಚೆಸ್ಟರ್​ ಸಮ್ಮೇಳನದಲ್ಲಿ ಬ್ರಿಟಿಷ್​ ಕಾರ್ಡಿಯೊವಸ್ಕ್ಯೂಲರ್​ ಸೊಸೈಟಿ ಈ ಅಧ್ಯಯನ ವರದಿ ಮಂಡಿಸಿದೆ. ಈ ವೇಳೆ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶೇ 13ರಷ್ಟು ಹೃದಯಾಘಾತ ಪ್ರಕರಣ ಸೋಮವಾರ ವರದಿ ಆಗುತ್ತಿದೆ ಎಂದು ತಿಳಿಸಿದೆ.

ಬೆಲ್ಫಾಸ್​ ಹೆಲ್ತ್​​ ಮತ್ತು ಸೋಶಿಯಲ್​ ಕೇರ್​ ಟ್ರಸ್ಟ್​​ ವೈದ್ಯರು ಹಾಗೂ ಐರ್ಲೆಂಡ್​ನ ರಾಯಲ್​ ಕಾಲೇಜ್ ಆಫ್​ ಸರ್ಜನ್​ ಈ ಸಂಬಂಧ ವಿಶ್ಲೇಷಣೆ ನಡೆಸಿದೆ. ಇದಕ್ಕಾಗಿ ಐರ್ಲೆಂಡ್​ ದ್ವೀಪಗಳ 10,528 ಭಾಗಿದಾರರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 2013 ಮತ್ತು 2018ರಲ್ಲಿ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಗಂಭೀರವಾದ ಹೃದಯಾಘಾತ ಎಸ್​ಟಿ- ಸೆಗ್ಮೆಂಟ್​ ಎಲೆವೆಷನ್​ ಮಯೊಕಾರ್ಡಿಯಲ್​ ಇನ್ಫ್ರಾಕ್ಷನ್​ (ಎಸ್​ಟಿಇಎಂಐ) ಆಗಿದೆ.

ಎಸ್​ಟಿಇಎಂಐ ಹೃದಯದ ಪರಿಧಮನಿ ಮತ್ತು ಅಪಧಮನಿ ಸಂಪೂರ್ಣವಾಗಿ ಮುಚ್ಚಿರುವುದರಿಂದ ಉಂಟಾಗುತ್ತದೆ. ಕೆಲಸದ ವಾರದ ಆರಂಭದ ದಿನ, ಈ ಎಸ್​ಇಎಂಐ ದರ ಹೆಚ್ಚಿರುತ್ತದೆ ಎಂದು ಸಂಶೋಧನೆ ತಿಳಿಸಿದೆ. ಮತ್ತೊಂದು ಪ್ರಮುಖ ಅಂಶ ಎಂದರೆ ​ಎಸ್​ಟಿಇಎಂಐ ಕೂಡ ಹೆಚ್ಚಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದೇ ವೇಳೆ ತಜ್ಞರು ಈ ಬ್ಲೂ ಮಂಡೆ (Blue Monday) ವಿದ್ಯಮಾನ ಕೂಡ ಏನಕ್ಕೆ ಸಂಭವಿಸುತ್ತದೆ ಎಂಬುದನ್ನು ವಿಶ್ಲೇಷಿಸುವಲ್ಲಿ ವಿಫಲರಾಗಿದ್ದಾರೆ.

ಇವು ಪ್ರಮುಖ ಅಂಶ: ಹಿಂದಿನ ಅಧ್ಯಯನದಲ್ಲಿ, ಹೃದಯಾಘಾತಗಳು ಸೋಮವಾರದೊಂದಿಗೆ ಎಂಬ ಅಂಶವೂ ಹೃದಯದ ಬಡಿತ ಮತ್ತು ದೇಹದ ನಿದ್ರೆ ಮತ್ತು ಎಚ್ಚರದ ಚಕ್ರದೊಂದಿಗೆ ಸಂಬಂಧವನ್ನು ಹೊಂದಿದೆ ಎಂಬುದನ್ನು ಎತ್ತಿ ತೋರಿಸಿದೆ.

ಕೆಲಸದ ವಾರದ ಆರಂಭ ದಿನ ಮತ್ತು ಎಸ್​ಟಿಇಎಂಐ ಘಟನೆಗಳ ನಡುವಿನ ಬಲವಾದ ಅಂಕಿಅಂಶಗಳ ಸಂಬಂಧವನ್ನು ನಾವು ಕಂಡುಕೊಂಡಿದ್ದೇವೆ. ಮೊದಲೇ ವಿವರಿಸಿದಂತೆ ಅದರ ಕುತೂಹಲ ಉಳಿದಿದೆ ಎಂದು ಸಂಶೋಧನೆಯ ಪ್ರಮುಖರಾದ ಡಾ ಜಾಕ್​ ಲಫಾನ್​ ತಿಳಿಸಿದ್ದಾರೆ.

ಇದಕ್ಕೆ ಕಾರಣಗಳು ಹಲವು ಇರಬಹುದು. ಆದಾಗ್ಯೂ ಹಿಂದಿನ ಅಧ್ಯಯನದಲ್ಲಿ ಗಮನಿಸಿದಂತೆ ಇದು ಹೃದಯದ ಅಂಶವನ್ನು ಇದಕ್ಕೆ ಪ್ರಮುಖವಾಗಿರುತ್ತದೆ. ಎಸ್​ಟಿಇಎಂಐಗೆ ತಕ್ಷಣದಲ್ಲಿ ಮೌಲ್ಯಮಾಪನ ಮತ್ತು ಚಿಕಿತ್ಸೆಯನ್ನು ನೀಡುವ ಮೂಲಕ ಹೃದಯಕ್ಕೆ ಆಗುವ ಹಾನಿಯನ್ನು ತಡೆಯಬಹುದು. ಇದು ಸಾಮಾನ್ಯವಾಗಿ ತುರ್ತು ಅಂಜಿಯೋಪ್ಲಾಸ್ಟಿ ಅವಶ್ಯಕತೆ ಬೇಡುತ್ತದೆ. ಇಲ್ಲಿ ಹೃದಯದ ಕವಾಟದಲ್ಲಿ ಆಗಿರುವ ಬ್ಲಾಕ್​ಗಳನ್ನು ತೆಗೆಯಲಾಗುತ್ತದೆ. ಈ ಅಧ್ಯಯನವು ನಿರ್ದಿಷ್ಟ ಗಂಭೀರವಾದ ಹೃದಯಾಘಾತದ ಸಮಯದ ಬಗ್ಗೆ ಪುರಾವೆಗಳನ್ನು ನೀಡುತ್ತದೆ. ವಾರದ ನಿರ್ದಿಷ್ಟ ದಿನದ ಕುರಿತ ಆಯ್ಕೆಯೂ ಇದೀಗ ಈ ಗಂಭೀರ ಸಮಸ್ಯೆಯನ್ನು ಅರ್ಥ ಮಾಡಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಭವಿಷ್ಯದಲ್ಲಿ ಜೀವ ಉಳಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ದುಃಖದಿಂದ ಹೃದಯ ಸಮಸ್ಯೆ ಹೆಚ್ಚುತ್ತದೆ: ಅಧ್ಯಯನದಲ್ಲಿ ಬಯಲು

ABOUT THE AUTHOR

...view details