ಹೈದರಾಬಾದ್: ಸುಧಾ, 42 ವರ್ಷದ ಮಹಿಳೆ ಕೌನ್ಸೆಲರ್ ಕ್ಯಾಬಿನ್ಗೆ ತನ್ನ ವೈದ್ಯಕೀಯ ಫೈಲ್ ಮತ್ತು ಆತಂಕಭರಿತ ಮೂಖದೊಂದಿಗೆ ಆಗಮಿಸಿ, ಕಣ್ಣೀರು ಸುರಿಸುತ್ತಾಳೆ. ಕೋಣೆಯಲ್ಲಿ ಮೊದಲ ಕೆಲವು ನಿಮಿಷಗಳ ಕಾಲ ಪಿನ್ ಡ್ರಾಪ್ ಮೌನವಿರುತ್ತದೆ. ಕೌನ್ಸಿಲರ್ ಆಕೆಯ ಆತಂಕದ ಕಾರಣವನ್ನು ಪರಿಶೀಲಿಸುತ್ತಾರೆ.
ಸುಧಾ ತನ್ನ ವೈದ್ಯಕೀಯ ಫೈಲನ್ನು ಹಸ್ತಾಂತರಿಸಿ, ಕೆಲ ರುಟೀನ್ ಪರೀಕ್ಷೆಗಳಿಗೆ ವೈದ್ಯರನ್ನು ಭೇಟಿಯಾಗಲು ಅವರು ರಕ್ತ ಪರೀಕ್ಷೆ ಮತ್ತು ಮ್ಯಾಮೊಗ್ರಫಿಗೆ ಸಲಹೆ ನೀಡಿರುವುದಾಗಿ ತಿಳಿಯುತ್ತದೆ.
ಕಷ್ಟಪಟ್ಟು ದುಡಿಯುವ ಗೃಹಿಣಿ ಮತ್ತು ಇಬ್ಬರು ಮಕ್ಕಳ ತಾಯಿ ಸುಧಾ. ಅವಳು ಈ ಪರೀಕ್ಷೆಗಳನ್ನು ನಡೆಸಬೇಕು ಎಂದು ಕೇಳಿಯೇ ಆತಂಕಕ್ಕೊಳಗಾಗಿದ್ದಾಳೆ. ನನಗೆ, ನನ್ನ ಮಕ್ಕಳಿಗೆ ಏನಾಗಬಹುದು? ನನ್ನ ಕುಟುಂಬವನ್ನು ನಾನು ಹೇಗೆ ನೋಡಿಕೊಳ್ಳಬಲ್ಲೆ? ಎಂಬ ಆಲೋಚನೆಗಳು ಅವಳ ಮನಸ್ಸಿನಲ್ಲಿ ಹರಿಯುತ್ತಿದೆ.
ಕೌನ್ಸಿಲರ್ ಆಕೆಯನ್ನು ಸಮಾಧಾನಪಡಿಸುತ್ತಾರೆ. ಆಕೆಗೆ ಪ್ರಾಥಮಿಕ ಪರೀಕ್ಷೆಗಳಿಗೆ ಒಳಗಾಗುವಂತೆ ಹೇಳಿದ ತಕ್ಷಣ, ಆಕೆಗೆ ಕ್ಯಾನ್ಸರ್ ಇದೆ ಎಂದು ಅರ್ಥವಲ್ಲ. ಸುಧಾಳರ ಕುಟುಂಬ ಕ್ಯಾನ್ಸರ್ನ ಇತಿಹಾಸವನ್ನು ಹೊಂದಿದ್ದರಿಂದ ಇದು ಕೇವಲ ಆರಂಭಿಕ ಕ್ರಮವಾಗಿದೆ.
ಇಂದಿನ ವಿಜ್ಞಾನ ಮತ್ತು ಔಷಧದ ಸುಧಾರಣೆಯೊಂದಿಗೆ ಅನೇಕ ಕ್ಯಾನ್ಸರ್ಗಳನ್ನು ಗುಣಪಡಿಸಲಾಗುತ್ತದೆ. ಅವುಗಳನ್ನು ಮೊದಲೇ ಪತ್ತೆ ಹಚ್ಚಿ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಈ ಮಾಹಿತಿಯನ್ನು ಪಡೆದ ಸುಧಾ, ವೈದ್ಯರು ಸೂಚಿಸಿದಂತೆ ಪರೀಕ್ಷೆಗೆ ಒಳಗಾಗಲು ಮಾನಸಿಕವಾಗಿ ಸಿದ್ಧಳಾಗಿ, ಪರೀಕ್ಷೆ ನಡೆಸಿ ಫಲಿತಾಂಶಗಳಿಗಾಗಿ ಕಾಯುತ್ತಿದ್ದಾಳೆ.
ಸುಧಾಳಂತೆ ಅನೇಕರು ಇದ್ದಾರೆ. ಪರೀಕ್ಷೆ ನಡೆಸಲು ಹೇಳಿದಾಕ್ಷಣ ಚಿಂತೆಗೊಳಗಾಗುತ್ತಾರೆ. ಕ್ಯಾನ್ಸರ್ ಎಂದು ಸಾವು ಸಂಭವಿಸಬಹುದು ಎಂದು ಅತಂಕಕೊಳ್ಳಗಾಗುತ್ತಾರೆ. ಆದರೆ ಕ್ಯಾನ್ಸರ್ ಎಂಬ ಈ ಯುದ್ಧದಲ್ಲಿ ಹೋರಾಡಿ ಅದರಿಂದ ಗೆದ್ದ ಧೈರ್ಯಶಾಲಿ ವ್ಯಕ್ತಿಗಳು ಹಾಗೂ ಗುಣಮುಖರಾದ ಅನೇಕ ಪ್ರಕರಣಗಳಿವೆ.
ಉತ್ತಮ ತಿಳುವಳಿಕೆಗಾಗಿ ನಾವು ಕಲ್ಪನೆ ಮತ್ತು ಸತ್ಯಗಳನ್ನು ತಿಳಿಯೋಣ:
ಕಲ್ಪನೆ: ಕ್ಯಾನ್ಸರ್ ಇರುವವರು ಇತರರಿಂದ ದೂರವಿರಬೇಕು.