ಕರ್ನಾಟಕ

karnataka

ETV Bharat / sukhibhava

Cancer care: ಕ್ಯಾನ್ಸರ್​ ಕಾಳಜಿ ಎಂಬುದು ರೋಗಿಗಳ ಮೇಲೆ ಗುರಿ ಹೊಂದಿರಬೇಕೆ ಹೊರತು ವಾಣಿಜ್ಯ ಉದ್ದೇಶದ ಮೇಲೆ ಅಲ್ಲ

ಕ್ಯಾನ್ಸರ್​​ ಹೊಸ ಆವಿಷ್ಕಾರಗಳು ವಾಣಿಜ್ಯಕ್ಕಿಂತ ರೋಗಿಗಳಿಗೆ ಮುಖ್ಯವಾದ ಫಲಿತಾಂಶಗಳ ಮೇಲೆ ಹೇಗೆ ಹೆಚ್ಚು ಗಮನಹರಿಸಬೇಕು ಎಂಬುದನ್ನು ಕ್ಯಾನ್ಸರ್ ತಜ್ಞರು ತಿಳಿಸಿದ್ದಾರೆ

By

Published : Jul 17, 2023, 5:35 PM IST

Cancer care should focus on patients rather than commerce: Lancet Comment
Cancer care should focus on patients rather than commerce: Lancet Comment

ನವದೆಹಲಿ: ಕ್ಯಾನ್ಸರ್​​ ಆರೈಕೆ ಮತ್ತು ಅವಿಷ್ಕಾರಗಳು ರೋಗಿಗಳು ಮತ್ತು ಅವರ ಚೇತರಿಕೆಯನ್ನು ಗುರಿಯಾಗಿಸಿಕೊಳ್ಳಬೇಕೆ ವಿನಃ ಅದರಲ್ಲಿ ವಾಣಿಜ್ಯದ ಉದ್ದೇಶಗಳು ಇರಬಾರದು ಎಂದು ಕ್ಯಾನ್ಸರ್​ ತಜ್ಞರು ತಿಳಿಸಿದ್ದಾರೆ. ಈ ಹೇಳಿಕೆಗಳನ್ನು ಲ್ಯಾನ್ಸೆಟ್​ ಆನ್​ಕಾಲಾಜಿ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಸಂಶೋಧನಾ ಕಾರ್ಯಗಳು ಉದ್ಯಮದ ನಿಯಂತ್ರಣವು ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ, ಉಪಶಮನದ ಆರೈಕೆ ಮತ್ತು ತಡೆಗಟ್ಟುವಿಕೆಗೆ ಹೊಸ ವಿಧಾನಗಳನ್ನು ತನಿಖೆ ಮಾಡುವ ವೆಚ್ಚವನ್ನು ಹೊಸ ಕ್ಯಾನ್ಸರ್ ಔಷಧಿಗಳ ಮೇಲೆ ಹೆಚ್ಚಿನ ಕೇಂದ್ರೀಕೃತವಾಗಿರುವ ವ್ಯವಸ್ಥೆಯನ್ನು ರಚಿಸಿದೆ.

ಗ್ಲೋಬಲ್​ ಆಂಕೊಲಾಜಿಸ್ಟ್‌ಗಳು ಮತ್ತು ಪೆಷೇಂಟ್​ ಅಡ್ವೋಕೆಟ್​​ ಒಳಗೊಂಡಿರುವ ಲೇಖಕರು, ಕ್ಯಾನ್ಸರ್ ಆರೈಕೆಯಲ್ಲಿ ಹೊಸ ರೋಗಿಯ ಕೇಂದ್ರಿತ ಚಳವಳಿಯ ಅಭಿವೃದ್ಧಿಗೆ ಪ್ರಮುಖ ಮಾರ್ಗಸೂಚಿಗಳನ್ನು ಸ್ಥಾಪಿಸಿದ್ದಾರೆ. ಕೆಲವು ದಶಕಗಳಿಂದ ಸಾರ್ವಜನಿಕ ಹೂಡಿಕೆಯು ಕ್ಲಿನಿಕಲ್​ ಟ್ರಯಲ್​ಗಳನ್ನು ವಿನ್ಯಾಸ ಮಾಡಲಾಗುತ್ತಿದೆ. ಉದ್ಯಮ ಹೂಡಿಕೆ ಪ್ರಯೋಗಗಳು ನಿಯಂತ್ರಣಗುರಿ ಅಥವಾ ವಾಣಿಜ್ಯ ಲಾಭವನ್ನು ಸಾಧಿಸುವ ಗುರಿ ಹೊಂದಿದೆ.

ಜೀವಂತ ರೋಗಿಗಳಿಗಿಂತ ಈ ಕ್ಯಾನ್ಸರ್​​ ಚಿಕಿತ್ಸೆಗಳು ನೈಜವಾಗಿ ವಿಭಿನ್ನವಾಗಿರುತ್ತದೆ. ಕೆಲ ಹೊಸ ಚಿಕಿತ್ಸೆಗಳ ಬೆಳವಣಿಗೆಗಳು ರೋಗಿಗಳ ದೀರ್ಘ ಜೀವನಕ್ಕೆ ಅಥವಾ ಅವರ ಆರಾಮದಾಯಕದ ಕಾಳಜಿ ಹೊಂದಿಲ್ಲ ಎಂದು ಕೆನಡಾದ ಕಿಂಗ್ಸ್​ಟಾನ್​ನ ಕ್ವೀನ್​ ಯುನಿವರ್ಸಿಟಿ ಪ್ರೊ ಕ್ರಿಸ್ಟೋಫರ್​​ ಭೂತ್​ ತಿಳಿಸಿದ್ದಾರೆ. ಜೊತೆಗೆ ಉದ್ಯಮಗಳ ಕ್ಲಿನಿಕಲ್​ ಅವಶ್ಯಕತೆ ಲೆಕ್ಕಿಸದೆ, ನೀತಿ-ನಿರ್ಮಾಪಕರು ಮತ್ತು ಆಂಕೊಲಾಜಿಸ್ಟ್‌ಗಳ ಮೇಲೆ ಪ್ರಭಾವ ಬೀರುವ ಗುರಿಯನ್ನು ಹೊಂದಿರುವ ವ್ಯಾಪಾರೋದ್ಯಮ ಪ್ರಚಾರಕ್ಕಾಗಿ ಉದ್ಯಮದ ಆದಾಯದ ಗಣನೀಯ ಪ್ರಮಾಣವನ್ನು ಹೇಗೆ ಬಳಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಮುಂದಿನ ಪೀಳಿಗೆಯ ಆಂಕೊಲಾಜಿಸ್ಟ್​​ಗಳಿಗೆ ಶಿಕ್ಷಣ ಮತ್ತು ಸಬಲೀಕರಣ ನಡೆಸಿ, ಮೂರು ಪ್ರಮುಖ ಕ್ಷೇತ್ರದಲ್ಲಿ ರೋಗಿಗಳಿಗೆ ಉತ್ತಮವಾಗಿರುವುದನ್ನು ಮಾಡಲು ಅವರನ್ನು ಹುರಿದುಂಬಿಸಬೇಕಿದೆ. ಇದು ಕ್ಲಿನಿಕಲ್​ ಪ್ರಯೋಗದ ಬಳಿಕ ಸೇರಿದ್ದು, ಇದರ ವರದಿಗಳು ರೋಗಿಗಳಿಗೆ ಪ್ರಮುಖವಾಗಿದೆ. ಈ ಕ್ಲಿನಿಕಲ್​ ನಿರ್ಧಾರಗಳು ರೋಗಿಗಳ ಅಭಿವೃದ್ಧಿಗೆ ಆಗಬೇಕಿದೆ.

ಆಂಕೊಲಾಜಿ ಎನ್ನುವುದು ಜಾಗತಿಕ ಉಪಕ್ರಮವಾಗಿದ್ದು, ಅದು ಲಾಭಕ್ಕಿಂತ ಜನರಿಗೆ ಆದ್ಯತೆ ನೀಡುತ್ತದೆ. ಜೊತೆಗೆ ರೋಗಿಗಳೊಂದಿಗೆ ಹಂಚಿಕೆಯ ನಿರ್ಧಾರವನ್ನು ಉತ್ತೇಜಿಸುತ್ತದೆ. ಕ್ಯಾನ್ಸರ್​​ ಹೊಸ ಆವಿಷ್ಕಾರಗಳು ವಾಣಿಜ್ಯಕ್ಕಿಂತ ರೋಗಿಗಳಿಗೆ ಮುಖ್ಯವಾದ ಫಲಿತಾಂಶಗಳ ಮೇಲೆ ಹೇಗೆ ಹೆಚ್ಚು ಗಮನಹರಿಸಬೇಕು ಎಂಬುದನ್ನು ಕ್ಯಾನ್ಸರ್ ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Heart Failure: ವೈಫಲ್ಯಕ್ಕೂ ಮುನ್ನ, ಎಚ್ಚರಿಕೆ ನೀಡುತ್ತದೆ ಹೃದಯ: ಈ ಲಕ್ಷಣದ ಬಗ್ಗೆ ನಿರ್ಲಕ್ಷ್ಯ ಬೇಡ ಎಂದ ತಜ್ಞರು

ABOUT THE AUTHOR

...view details