ಕರ್ನಾಟಕ

karnataka

ETV Bharat / sukhibhava

ಸಾಮಾಜಿಕ ಸಂವಹನ- ಏಕಾಂತತೆ ಕುರಿತು ಹೀಗೊಂದು ಸಂಶೋಧನೆ

ಸಾಮಾಜಿಕ ಸಂವಹನ ಭಯದಿಂದಾಗಿ ಆತಂಕ ಮತ್ತು ಇತರರ ಜೊತೆ ಸಂವಹನದಿಂದಾಗಿ ಅವರು ಏಕಾಂತೆಯನ್ನು ಬಯಸುತ್ತಾರೆ. ಸಾಮಾನ್ಯಕ್ಕಿಂತ ಹೆಚ್ಚಿನ ಸಮಯವನ್ನು ಅವರು ಏಕಾಂತತೆಯಲ್ಲಿ ಕಳೆಯಲು ಇಷ್ಟಪಡುತ್ತಾರೆ ಎಂದು ಹೋಪ್​ ವೈಟ್​ ತಿಳಿಸಿದ್ದಾರೆ.

By

Published : Dec 10, 2022, 6:32 PM IST

ಸಾಮಾಜಿಕ ಸಂವಹನ- ಏಕಾಂತತೆ ಕುರಿತು ಹೀಗೊಂದು ಸಂಶೋಧನೆ
researchers-explore-effect-of-me-time-on-social-interaction

ವಾಷಿಂಗ್ಟನ್​: ಸಾಮಾಜಿಕ ಸಂವಹನ ಆನಂದಿಸಿದರೂ ಒತ್ತಡ ಆಥವಾ ಅಹಿತಕರ ಸಾಮಾಜಿಕ ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲು ಏಕಾಂತವಾಗಿ ಕಾಲ ಕಳೆಯುವ ಉತ್ತಮ ಮಾರ್ಗ ಎಂಬುದನ್ನು ಅನೇಕ ಯುವಜನತೆ ಕಂಡುಕೊಂಡಿದ್ದಾರೆ ಎಂದು ಸಂಶೋಧನೆ ತಿಳಿಸಿದೆ.

ನಡುವಳಿಕೆಗಳ ಅಭಿವೃದ್ಧಿ ಸಂಬಂಧ ನಡೆಸಿದ ಅಂತಾರಾಷ್ಟ್ರೀಯ ಜರ್ನಲ್​ನಲ್ಲಿ ಏಕಾಂಗಿಯಾಗಿ ಹಲವು ಗಂಟೆಗಳ ಕಾಲ ಸಾಮಾಜಿಕ ಸಂವಹನದಲ್ಲಿ ತೊಡಗುವುದು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂಬುದನ್ನು ಈ ಹಿಂದಿನ ಅಧ್ಯಯನ ತಿಳಿಸಿತ್ತು. ಅಲ್ಲದೇ ಏಕಾಂಗಿತನ ಮತ್ತು ಭಾವನಾತ್ಮಕ ಒತ್ತಡ ಮೂಡಿಸುತ್ತದೆ ಎಂದಿತ್ತು. ಮತ್ತೊಂದು ಅಧ್ಯಯನ ಏಕಾಂಗಿಯಾಗಿ ಸಾಮಾಜಿಕ ಸಂವಹನದಲ್ಲಿ ತೊಡಗುವುದು ಸಕಾರಾತ್ಮಕತೆ ಮೂಡಿಸುತ್ತದೆ. ಜೊತೆಗೆ ಸಿಟ್ಟು, ಆತಂಕ ಮತ್ತು ಬೇಜಾರನ್ನು ನೀಗಿಸುತ್ತದೆ ಎಂದಿದೆ. ಈ ಸಂಶೋಧನೆ ಏಕಾಂತದಲ್ಲಿ ಜನರು ಸಾಮಾಜಿಕ ಸಂವಹನದಲ್ಲಿ ಕಾಲ ಕಳೆಯುವುದಕ್ಕೂ ಯಾರೊಟ್ಟಿಗೆ ಜನರು ಕಾಲ ಕಳೆಯುವಾಗ ಏಕಾಂತ ಬಯಸುತ್ತಾರೆ ಎಂಬುದರ ಮೇಲೆ ಆಧರಿಸಿದೆ.

ಸಾಮಾಜಿಕ ಸಂವಹನ ಭಯದಿಂದಾಗಿ ಆತಂಕ ಮತ್ತು ಇತರರ ಜೊತೆ ಸಂವಹನದಿಂದಾಗಿ ಅವರು ಏಕಾಂತತೆಯನ್ನು ಬಯಸುತ್ತಾರೆ. ಸಾಮಾನ್ಯಕ್ಕಿಂತ ಹೆಚ್ಚಿನ ಸಮಯವನ್ನು ಅವರು ಒಬ್ಬಂಟಿಯಾಗಿ ಕಳೆಯಲು ಇಷ್ಟಪಡುತ್ತಾರೆ ಎಂದು ಹೋಪ್​ ವೈಟ್​ ತಿಳಿಸಿದ್ದಾರೆ.

ಏಕಾಂತ ಸಮಯವನ್ನು ಪುನಶ್ಚೇತನಕಾತಿ ಅವರು ಬಳಸುವುದಿಲ್ಲ. ಬದಲಾಗಿ, ಅವರು ತಮ್ಮ ಏಕಾಂಗಿತನವನ್ನು ಮೆಲುಕು ಹಾಕುವ ಸಮಯವಾಗಿ ಕಳೆಯಬಹುದು. 18 ರಿಂ 26 ವರ್ಷದ ವಯೋಮಾನದ 411 ಮಂದಿಯನ್ನು ಈ ಸಂಶೋಧನೆಗೆ ಒಳಸಿಕೊಳ್ಳಲಾಗಿದೆ. ಸ್ಮಾರ್ಟ್​ಫೋನ್​ಗಳಲ್ಲಿ ಏಕಾಂಗಿಯಾಗಿ ಸಮಯ ಕಳೆಯುವ ಅವರು, ಇದಾದ ಬಳಿಕ ಸಾಮಾಜಿಕ ಸಂಬಂಧವನ್ನು ಹೇಗೆ ಅನುಭವಿಸುತ್ತಾರೆ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ. ಏಕಾಂಗಿಯಾಗಿ ಕಾಲ ಕಳೆದ ಬದಲಾವಣೆಗಳನ್ನು ಪರೀಕ್ಷಿಸಲು ಅವಕಾಶ ಮಾಡಿಕೊಟ್ಟಿತು. ಆದ್ದರಿಂದ ಅವರು ಸಾಮಾಜಿಕ ಸಂವಹನಗಳ ಮೇಲೆ ಏಕಾಂತತೆಯಲ್ಲಿ ಹೆಚ್ಚಿದ ಸಮಯದ ಪ್ರಭಾವವನ್ನು ನಿರ್ಧರಿಸಬಹುದು.

ಜೀವನದಲ್ಲಿ ಅನೇಕ ಬಾರಿ ಏಕಾಂಗಿಯಾಗಿ ಕಾಲ ಕಳೆಯುವುದು ಸಾಮಾನ್ಯ. ಇದರಿಂದ ಯಾರಿಗೆ ಯಾವಾಗ ಅಪಾಯ ಅಥವಾ ಲಾಭ ಎಂಬುದು ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ. ಕೆಲವು ಜನರು ಏಕಾಂತತೆಯಲ್ಲಿ ಸಕಾರಾತ್ಮಕ ಮತ್ತು ನಕಾರತ್ಮಕ ಭಾವನೆಯನ್ನು ಹೊಂದುತ್ತಾರೆ ಎನ್ನುತ್ತಾರೆ ಜುಲಿಯಾ ಬೋಕರ್​.

ಇದನ್ನೂ ಓದಿ:ಭಾರತದಲ್ಲಿ ಹೆಚ್ಚುತ್ತಿದೆ ಅನಿರೀಕ್ಷಿತ ಹೃದಯಾಘಾತ, ಪಾರ್ಶ್ವವಾಯು ಪೀಡಿತರ ಸಂಖ್ಯೆ.. ಕಾರಣ?

ABOUT THE AUTHOR

...view details