ಕರ್ನಾಟಕ

karnataka

ETV Bharat / state

ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ: ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಭಸ್ಮ - ಆಟೋ ಮೊಬೈಲ್ ಅಂಗಡಿ ಭಸ್ಮ

ಶಹಾಪುರ ಪಟ್ಟಣದ ಜೀತೂ ಸಿಂಗ್ ಎಂಬುವರಿಗೆ ಸೇರಿದ ಆಟೋ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿ, ಲಕ್ಷಾಂತ ರೂ ನಷ್ಟವಾಗಿದೆ.

ಆಟೋ ಮೊಬೈಲ್ ಅಂಗಡಿ
ಆಟೋ ಮೊಬೈಲ್ ಅಂಗಡಿ

By

Published : Feb 17, 2021, 5:00 AM IST

ಯಾದಗಿರಿ: ಶಾರ್ಟ್ ಸರ್ಕ್ಯೂಟ್​ನಿಂದ ಆಟೋ ಮೊಬೈಲ್ ಅಂಗಡಿಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿ ಆಗಿರುವ ಘಟನೆ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ನಡೆದಿದೆ..

ಶಹಾಪುರ ಪಟ್ಟಣದ ಜೀತೂ ಸಿಂಗ್ ಎಂಬುವರಿಗೆ ಸೇರಿದ ರಾಮದೇವ್ ಆಟೋ ಮೊಬೈಲ್ ಅಂಗಡಿಗೆ ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ತಗುಲಿದೆ. ಅಂಗಡಿ ಸಮೇತ ಅದರಲ್ಲಿದ್ದ 10 ಲಕ್ಷ ರೂ.ಗೂ ಅಧಿಕ ಮೌಲ್ಯದ ಸಾಮಗ್ರಿಗಳು ಹೊತ್ತಿ ಉರಿದಿವೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುವಂತಾಯಿತು.

ಹೊತ್ತಿ ಉರಿದ ಆಟೋ ಮೊಬೈಲ್ ಅಂಗಡಿ
ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details