ಕರ್ನಾಟಕ

karnataka

ETV Bharat / state

ಕೊರೊನಾದಿಂದ ಗುಣಮುಖರಾದವರಿಗೆ ಸಾಮಾಜಿಕ ಅಂತರ ಮರೆತು ಅದ್ಧೂರಿ ಸ್ವಾಗತ - ಕೊರೊನಾ ವೈರಸ್​

ಆಸ್ಪತ್ರೆಯ ಕ್ವಾರಂಟೈನ್​ನಿಂದ ಗುಣಮುಖರಾಗಿ ಮನೆಗೆ ತೆರಳಿದರು ಕೂಡಾ, ಮನೆಯಲ್ಲಿ ಕೆಲ ದಿನಗಳವರೆಗೆ ನಿಗಾದಲ್ಲಿರಬೇಕು ಮತ್ತು ಮನೆಯವರ ಜೊತೆ ಅಂತರ ಕಾಯ್ದುಕೊಳ್ಳಬೇಕು. ಅದ್ರೆ ಯಾದಗಿರಿ ನಗರದಲ್ಲಿ ಸೀಲ್​ಡೌನ್​ ಮಾಡಲಾದ ಪ್ರದೇಶದಲ್ಲಿ ಆಸ್ಪತ್ರೆಯಿಂದ ಗುಣಮುಖರಾದ ರೋಗಿಗಳಿಗೆ ಸ್ಥಳೀಯರು ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಆತಂಕ ಸೃಷ್ಟಿಸಿದ್ದಾರೆ.

yadagiri-discharge-corona-patient-welcomed
ಯಾದಗಿರಿ ಕೊರೊನಾ ವೈರಸ್​ ಪ್ರಕರಣ

By

Published : May 30, 2020, 5:43 PM IST

ಯಾದಗಿರಿ:ಸೀಲ್ ಡೌನ್ ಪ್ರದೇಶದಲ್ಲಿ‌ ನಿಯಮ ಉಲ್ಲಂಘಿಸಿ ಸಂಭ್ರಮಾಚರಣೆ ನಡೆಸುವ ಮೂಲಕ ಕೊರೊನಾ ವೈರಸ್​​ನಿಂದ ಗುಣಮುಖರಾದ ತಂದೆ-ಮಗಳಿಗೆ ಸ್ವಾಗತ ಕೋರಲಾಗಿದೆ.

ನಗರದ ದುಕನವಾಡಿಯಲ್ಲಿ ಈ ಘಟನೆ ಜರಗಿದ್ದು, ಸಂಭ್ರಮದಲ್ಲಿ ಸ್ಥಳೀಯರು ಸರ್ಕಾರದ ನಿಯಮಗಳನ್ನ ಉಲ್ಲಂಘಿಸಿದ್ದಾರೆ. ದುಕನವಾಡಿಯ ನಿವಾಸಿಗಳಾದ ತಂದೆ ಮಗಳಿಗೆ ಕೊರೊನಾ ಪಾಸಿಟಿವ್ ಬಂದ ಮೇಲೆ ಇವರನ್ನ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಕೋವಿಡ್ 19 ವಾರ್ಡ್​ಗೆ ದಾಖಲಿಸಲಾಗಿತ್ತು.

ಗುಣಮುಖರಾದ ಸೋಂಕಿತರಿಗೆ ಅಂತರ ಮರೆತು ಅದ್ಧೂರಿ ಸ್ವಾಗತ ಕೋರಿದ ಜನ

ಸದ್ಯ ತಂದೆ-ಮಗಳು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಇವರಿಬ್ಬರನ್ನೂ ಬಿಡುಗಡೆ ಮಾಡಲಾಗಿದೆ. ದುಕನವಾಡಿ ನಿವಾಸಿಗಳು ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸುವ ಮೂಲಕ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತು ಸಂಭ್ರಮದಲ್ಲಿ ಮುಳುಗಿದ್ದರು.

ಈಗಾಗಲೇ ದುಕನವಾಡಿ ಪ್ರದೇಶ ಜಿಲ್ಲಾಡಳಿತ ಕಂಟೇನ್ಮೆಂಟ್ ಪ್ರದೇಶವೆಂದು ಘೋಷಿಸಿದೆ. ಇದರ ನಡುವೆ ಸಾಮಾಜಿಕ ಅಂತರ ಮರೆತು ಸ್ಥಳೀಯರು ಆತಂಕ ಸೃಷ್ಟಿಸಿದ್ದಾರೆ.

ABOUT THE AUTHOR

...view details