ಕರ್ನಾಟಕ

karnataka

ETV Bharat / state

ನಗರಸಭೆಯವರಿಗೆ ಕಣ್ಣು ಕಾಣೋದಿಲ್ವೇ.. ಬೀದಿ ದೀಪ ಇಲ್ಲದೆ ಜನ ಹೇಗೆ ರಸ್ತೆಯಲ್ಲಿ ಸಂಚರಿಸ್ಬೇಕ್ರೀ.. - ಯಾದಗಿರಿ ಜಿಲ್ಲೆಯ ಸುರಪುರ

ಕಳೆದ ಕೆಲ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹಾಗೂ ಶಾಸಕ ನರಸಿಂಹ ನಾಯಕ ರಾಜುಗೌಡ ಅವರು ಸಭೆ ನಡೆಸಿ,ನಗರದ ಯಾವುದೇ ರಸ್ತೆಗಳಲ್ಲಿ ಬೀದಿದೀಪ ಇಲ್ಲವೆಂದು ಜನ ಹೇಳಬಾರದು. ಆ ರೀತಿಯಲ್ಲಿ ದೀಪಗಳನ್ನ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.

There is no street light on the 3 kilometer road in Surapur
ಬೀದಿದೀಪಗಳಿಲ್ಲದೇ ಬಿಕೋ ಎನ್ನುತ್ತಿರುವ ರಸ್ತೆ..ಸಚಿವರು ಆದೇಶಿಸಿದ್ರೂ ಇತ್ತ ಗಮನ ಹರಿಸದ ನಗರಸಭೆ

By

Published : May 3, 2020, 9:30 AM IST

ಯಾದಗಿರಿ :ಸುರಪುರ ನಗರಸಭೆಯಿಂದ ಕಲಬುರ್ಗಿಗೆ ಹೋಗುವ ನಾಲ್ವಡಿ ರಾಜಾವೆಂಕಟಪ್ಪ ನಾಯಕ ವೃತ್ತದವರೆಗಿನ 3 ಕಿ.ಮೀ ಉದ್ದದ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ಜನತೆ ಓಡಾಡಲು ಭಯ ಪಡುವಂತಾಗಿದೆ.

3 ಕಿ.ಮೀ ರಸ್ತೆಯಲ್ಲಿ ಕೇವಲ ಮೂರು ಮರ್ಕ್ಯುರಿ ಲೈಟ್‌ಗಳನ್ನ ಬಿಟ್ಟರೆ ಇನ್ನುಳಿದ ಕಂಬಗಳಿಗೆ ದೀಪವಿಲ್ಲದೆ ಇಡೀ ರಸ್ತೆಯಲ್ಲಿ ಕತ್ತಲು ಆವರಿಸಿಕೊಂಡಿದೆ. ಅನೇಕ ಸಂಘ-ಸಂಸ್ಥೆಗಳು ನಗರಸಭೆಗೆ ಈ ಬಗ್ಗೆ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಕಳೆದ ಕೆಲ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹಾಗೂ ಶಾಸಕ ನರಸಿಂಹ ನಾಯಕ ರಾಜುಗೌಡ ಅವರು ಸಭೆ ನಡೆಸಿ,ನಗರದ ಯಾವುದೇ ರಸ್ತೆಗಳಲ್ಲಿ ಬೀದಿದೀಪ ಇಲ್ಲವೆಂದು ಜನ ಹೇಳಬಾರದು. ಆ ರೀತಿಯಲ್ಲಿ ದೀಪಗಳನ್ನ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.

ಆದರೆ, ನಗರಸಭೆ ಎಷ್ಟೇ ಮನವಿ ಮಾಡಿದ್ರೂ ಬೀದಿದೀಪ ಅಳವಡಿಕೆಗೆ ಮುಂದಾಗಿಲ್ಲ. ಮಳೆಗಾಲ ಸಮೀಪಿಸುತ್ತಿರುವುದರಿಂದ ಕೂಡಲೇ ಬೀದಿ ದೀಪಗಳನ್ನ ಅಳವಡಿಸಬೇಕು. ಇಲ್ಲವಾದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details