ಯಾದಗಿರಿ: ತಾಲೂಕಿನ ಬಂದಳ್ಳಿ ಗ್ರಾಮದ ಬಳಿ ಇರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಅನಿಲ್ ಕುಮಾರ ಪಂಚಾಳ ಅವರನ್ನ ಕರ್ತವ್ಯ ಲೋಪದ ಹಿನ್ನೆಲೆ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಮ್ ಕುರ್ಮಾರಾವ್ ಆದೇಶ ಹೊರಡಿಸಿದ್ದಾರೆ.
ಕರ್ತವ್ಯ ಲೋಪದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ಸೇವೆಯಿಂದ ಅಮಾನತು - suspension of hostel warden
ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಅನಿಲ್ ಕುಮಾರ ಪಂಚಾಳ ಅವರನ್ನ ಕರ್ತವ್ಯ ಲೋಪದ ಹಿನ್ನೆಲೆ ಸೇವೆಯಿಂದ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಮ್ ಕುರ್ಮಾರಾವ್ ಆದೇಶ ಹೊರಡಿಸಿದ್ದಾರೆ.
![ಕರ್ತವ್ಯ ಲೋಪದ ಹಿನ್ನೆಲೆ ಹಾಸ್ಟೆಲ್ ವಾರ್ಡನ್ ಸೇವೆಯಿಂದ ಅಮಾನತು Suspension of warden with background hostel service](https://etvbharatimages.akamaized.net/etvbharat/prod-images/768-512-5584118-thumbnail-3x2-ydgr.jpg)
ನಿನ್ನೆ ರಾತ್ರಿ ಈ ವಸತಿ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ದಿಢೀರ್ ಭೇಟಿ ನೀಡಿದಂತಹ ಸಂದರ್ಭದಲ್ಲಿ ಅಲ್ಲಿನ ಅವ್ಯವಸ್ಥೆ ಕಂಡು ಹಾಸ್ಟೆಲ್ ವಾರ್ಡನ್ಗೆ ಸ್ಥಳಕ್ಕೆ ಬರುವಂತೆ ಸೂಚಿಸಿದ್ದರು. ವಾರ್ಡನ್ ಅನಿಲಕುಮಾರಗೆ ಸುಧೀರ್ಘ ಕಾಲ ಕರೆ ಮಾಡಿದರೂ ಸಹ ಫೋನ್ ಚಾಲ್ತಿಯಲ್ಲಿರದೇ ಸಚಿವರ ಭೇಟಿ ವೇಳೆ ಉದ್ದೇಶಪೂರ್ವಕವಾಗಿ ವಾರ್ಡನ್ ಗೈರು ಇರುವುದು ಕಂಡುಬಂದಿತ್ತು.
ಹಾಗಾಗಿ ವಾರ್ಡನ್ ಅನಿಲ್ ಕುಮಾರ್ ಕರ್ತವ್ಯ ಲೋಪ, ಅಶಿಸ್ತಿನ ವರ್ತನೆ, ಬೇಜವಾಬ್ದಾರಿತನದ ನಡವಳಿಕೆ ಹಿನ್ನೆಲೆಯಿಂದಾಗಿ ಜಿಲ್ಲಾಧಿಕಾರಿ ಎಮ್ ಕುರ್ಮಾರಾವ್ ಅವರು ಅನಿಲ್ ಕುಮಾರ ಪಂಚಾಳ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ.