ಸುರಪುರ: ತಾಲೂಕಿನ ಕಕ್ಕೇರಾ ಬಳಿಯ ಪರಸನಹಳ್ಳಿ ದೊಡ್ಡಿಯ ರೈತನೊಬ್ಬ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೌತೆಕಾಯಿ ಬೆಳೆದಿದ್ದು, ಈಗ ವ್ಯಾಪಾರ ಇಲ್ಲದೇ ಕಂಗಾಲಾಗಿದ್ದಾರೆ.
ಮಾರುಕಟ್ಟೆಯಿಲ್ಲದೇ ಹೊಲದಲ್ಲೇ ಕೊಳೆಯುತ್ತಿರುವ ಸೌತೆಕಾಯಿ: ಕಂಗಾಲಾದ ರೈತ - ಸೌತೆಕಾಯಿ ನಾಶ
ಪರಸನಹಳ್ಳಿ ದೊಡ್ಡಿಯ ಬಸಪ್ಪ ಎಂಬ ರೈತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೌತೆಕಾಯಿ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಿಲ್ಲದೇ ಸೌತೆಕಾಯಿ ಬೆಳೆ ಬಳ್ಳಿಯಲ್ಲಿಯೆ ಕೊಳೆಯುತ್ತಿದ್ದು, ಸರ್ಕಾರ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಮಾರುಕಟ್ಟೆಯಿಲ್ಲದೇ ಸೌತೆಕಾಯಿ ನಾಶ
ಇನ್ನು ಸರ್ಕಾರ ಬೇರೆ ಬೇರೆ ವಲಯದ ಜನರ ನೆರವಿಗೆ ಬಂದಂತೆ ನನಗೂ ಸಹಾಯ ಧನ ನೀಡಿ ಎಂದು ರೈತ ಬಸಪ್ಪ ಪರಸನಹಳ್ಳಿ ದೊಡ್ಡಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.