ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್ ಪಲ್ಟಿ: ಪರೀಕ್ಷೆಗೆ ಹಾಲ್‌ ಟಿಕೆಟ್ ತರಲು ಹೊರಟಿದ್ದ ವಿದ್ಯಾರ್ಥಿ ದಾರುಣ ಸಾವು - ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಾವು

ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ಪರೀಕ್ಷಾ ಪ್ರವೇಶ ಪತ್ರ ತರಲು ಹೊರಟಿದ್ದ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ನಡೆದಿದೆ.

accident
ಅಪಘಾತದಲ್ಲಿ ವಿದ್ಯಾರ್ಥಿ ಸಾವು

By

Published : Jul 6, 2021, 3:34 PM IST

ಸುರಪುರ/ಯಾದಗಿರಿ:ಟ್ರ್ಯಾಕ್ಟರ್ ಪಲ್ಟಿಯಾಗಿ ಪರೀಕ್ಷಾ ಪ್ರವೇಶ ಪತ್ರ ತರಲು ಹೊರಟಿದ್ದ ವಿದ್ಯಾರ್ಥಿ ಮೃತಪಟ್ಟಿರೋ ಘಟನೆ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಬಳಿಯ ಬಾಚಿಮಟ್ಟಿ ರಸ್ತೆಯಲ್ಲಿ ನಡೆದಿದೆ.

ಅಪಘಾತದಲ್ಲಿ ವಿದ್ಯಾರ್ಥಿ ಸಾವು

ಮಂಗಳವಾರ ಬೆಳಗ್ಗೆ ಚಿಕ್ಕನಹಳ್ಳಿ ಗ್ರಾಮದಿಂದ ಬಾಚಿಮಟ್ಟಿ ಗ್ರಾಮದಲ್ಲಿರೋ ಪ್ರೌಢಶಾಲೆಯಲ್ಲಿ ಪರೀಕ್ಷೆ ಬರೆಯಲು 10ನೇ ತರಗತಿಯ ಪರೀಕ್ಷೆ ಪ್ರವೇಶ ಪತ್ರ ತರಲು ಮಂಜುನಾಥ (16 ವರ್ಷ) ಹೊರಟಿದ್ದ. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾದ ಶಾಲೆಯ​ ಬಳಿ ಬಿಡುವುದಾಗಿ ಟ್ರ್ಯಾಕ್ಟರ್ ಚಾಲಕ ಈತನನ್ನು ಹತ್ತಿಸಿಕೊಂಡು ಹೋಗಿದ್ದಾನೆ.

ಪೋಷಕರ ಆಕ್ರಂದನ

ಆದರೆ ಚಾಲಕನ‌ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ರಸ್ತೆ ಪಕ್ಕಕ್ಕೆ ಉರುಳಿದೆ. ವಿದ್ಯಾರ್ಥಿ ಮಂಜುನಾಥ್ ಕೆಳಗೆ ಬಿದ್ದಿದ್ದು ತಲೆಯ ಹಿಂಬದಿಗೆ ಬಲವಾಗಿ ಏಟು ಬಿದ್ದು ಮೆದುಳು ಹೊರಬಂದಿದೆ. ಪರಿಣಾಮ ಮಂಜುನಾಥ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details