ಕರ್ನಾಟಕ

karnataka

By

Published : Dec 3, 2019, 9:51 PM IST

ETV Bharat / state

ಜನರ ಜೊತೆ ನೇರ ಸಂಪರ್ಕ ಸಾಧಿಸಲು ಫೋನ್‌ ಇನ್‌ ಮೊರೆ ಹೋದ ಯಾದಗಿರಿ ಎಸ್ಪಿ

ಪೊಲೀಸ್ ಇಲಾಖೆ ಹಾಗೂ ಜನರ ಮಧ್ಯೆ ನೇರ ಸಂವಹನ ಸಾಧಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ ಸೋನಾವಣೆ ಫೋನ್‌ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಜನರ ಜೊತೆನೇರ ಸಂಪರ್ಕ ಸಾಧಿಸಲು ಫೋನ್ ಮೊರೆ ಹೋದ ಎಸ್​ಪಿ
ಜನರ ಜೊತೆನೇರ ಸಂಪರ್ಕ ಸಾಧಿಸಲು ಫೋನ್ ಮೊರೆ ಹೋದ ಎಸ್​ಪಿ

ಯಾದಗಿರಿ: ಪೊಲೀಸ್ ಇಲಾಖೆ ಹಾಗೂ ಜನರ ಜೊತೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್​​ ಸೋನಾವಣೆ ಫೋನ್‌ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಜನರ ಜೊತೆ ನೇರ ಸಂಪರ್ಕ ಸಾಧಿಸಲು ಫೋನ್ ಮೊರೆ ಹೋದ ಎಸ್​ಪಿ

15 ದಿನಕ್ಕೊಮ್ಮೆ ಈ ಕಾರ್ಯಕ್ರಮ ನಡೆಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಲು ಮುಂದಾಗಿರುವ ಎಸ್​ಪಿ, ಇಂದು ಎರಡನೇ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವತಃ ಎಸ್​ಪಿ ಅವರು ಸಾರ್ವಜನಿಕರ ಕರೆಗೆ ಸ್ಪಂದಿಸಿದ್ದಾರೆ. ಬಹುತೇಕ ಫೋನ್ ಕರೆಗಳು ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದ್ದು ಪೊಲೀಸ್‌ ಅಧಿಕಾರಿ ಅಗತ್ಯ ಸಲಹೆಗಳನ್ನು ನೀಡಿದ್ದಾರೆ. ಇನ್ನುಳಿದ ದೂರುಗಳಾದ ಜೂಜು, ಮಟ್ಕಾ, ಅಕ್ರಮ ಮರಳುಗಾರಿಕೆ, ಟ್ರಾಫಿಕ್ ಜಾಮ್ ವಿಚಾರವಾಗಿ ಬಂದಿರುವ ಕರೆಗಳಿಗೆ ಅತ್ಯಗತ್ಯ ಕ್ರಮ ಕೈಗೊಳ್ಳುವದಾಗಿ ತಿಳಿಸಿದ್ದಾರೆ.

ಒಂದು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವು ಭಾಗಗಳಿಂದ ಜನ ಫೋನ್ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದಲ್ಲದೇ ಈ ಹಿಂದೆ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿನ 14 ಪ್ರಕರಣಗಳ ಪೈಕಿ 10 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಎಸ್​ಪಿ ರಿಷಿಕೇಶ್ ಭಗವಾನ ತಿಳಿಸಿದ್ದಾರೆ.

ABOUT THE AUTHOR

...view details