ಕರ್ನಾಟಕ

karnataka

ಗುರುಮಠಕಲ್​ನಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ : ಮುಸ್ಲಿಂ ಬಾಂಧವರಿಂದ ಜ್ಯೂಸ್ ವಿತರಣೆ

By

Published : Feb 27, 2022, 5:33 PM IST

Updated : Feb 27, 2022, 8:17 PM IST

ಮೇರಾ ಭಾರತ ಮಹಾನ್ ವೇದಿಕೆಯ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಶಿವಾಜಿ ಮಹಾರಾಜರ ಮೂರ್ತಿಯ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ತಾಲೂಕಿನ ಹಿಂದುಪರ ಸಂಘಟನೆಗಳು ಪಟ್ಟಣದ ಬಸವೇಶ್ವರ ವೃತ್ತದಿಂದ ಗಾಂಧಿ ಮೈದಾನದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ರಥ ಸಾರಥ್ಯದಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದವು..

shivaji-jayanthicelebrated-in-gurumatkal
ಗುರುಮಠಕಲ್​ನಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ: ಮುಸ್ಲಿಂ ಬಾಂಧವರಿಂದ ಜ್ಯೂಸ್ ವಿತರಣೆ

ಗುರುಮಠಕಲ್ : ಗುರುಮಠಕಲ್‌ ತಾಲೂಕಿನ ಹಿಂದುಪರ ಸಂಘಟನೆಯ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಪ್ರಯುಕ್ತ ಶಿವಾಜಿ ಮಹಾರಾಜರ ಮೂರ್ತಿಯ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ತಾಲೂಕಿನ ಹಿಂದುಪರ ಸಂಘಟನೆಗಳು ಪಟ್ಟಣದ ಬಸವೇಶ್ವರ ವೃತ್ತದಿಂದ ಗಾಂಧಿ ಮೈದಾನದವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಯ ರಥ ಸಾರಥ್ಯದಲ್ಲಿ ಅದ್ಧೂರಿ ಮೆರವಣಿಗೆ ನಡೆದವು.

ಮೇರಾ ಭಾರತ ಮಹಾನ್ ವೇದಿಕೆಯ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸುವ ಸಂದರ್ಭದಲ್ಲಿ ಕೇಸರಿ ಧ್ವಜಗಳು ರಾರಾಜಿಸಿದವು. ಕೇಸರಿ ಶಾಲುಗಳನ್ನು ಭುಜದ ಮೇಲೆ ಹಾಕಿಕೊಂಡು ಮೆರವಣಿಗೆಯಲ್ಲಿ ಅನೇಕರು ಭಾಗವಹಿಸಿದ್ದರು.

ಮಹಾರಾಷ್ಟ್ರದಿಂದ ಆಗಮಿಸಿದ್ದ ಹೆಣ್ಣುಮಕ್ಕಳ ಡೊಳ್ಳುಕುಣಿತ ಜನರ ಆಕರ್ಷಣೆಯಾಗಿತ್ತು. ಡಿಜೆ ಸೌಂಡ್‌ಗೆ ಭರ್ಜರಿ ಡ್ಯಾನ್ಸ್ ಮಾಡಿ ಯುವಕರು ಕುಣಿದು ಕುಪ್ಪಳಿಸಿ, ಮೇರಾ ಭಾರತ ಮಹಾನ್, ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು.

ಗುರುಮಠಕಲ್​ನಲ್ಲಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ

ತಾಲೂಕಿನ ಎಲ್ಲ ಗ್ರಾಮಗಳಿಂದ ಸುಮಾರು 6000 ಸಾವಿರಕ್ಕೂ ಹೆಚ್ಚು ಜನರು ಶಿವಾಜಿ ಮಹಾರಾಜರ ಜಯಂತಿಯಲ್ಲಿ ಪಾಲ್ಗೊಂಡಿದ್ದರು. ಪಕ್ಷಬೇಧ ಮರೆತು ಎಲ್ಲ ಪಕ್ಷದ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಶೇಷವಾಗಿ ಮುಸ್ಲಿಂ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಿ ಹಿಂದೂ-ಮುಸ್ಲಿಂ ಸಹೋದರತ್ವದ ಭಾವನೆ ಮೂಡಿಸಿದರು.

ಪಟ್ಟಣದಲ್ಲಿ ಗಲಾಟೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುರುಮಠಕಲ್ ನಿಂದ ಬಂದ ಎಲ್ಲರಿಗೂ ಊಟದ ಮತ್ತು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯ ಕುಮಾರ ಅಂಗಡಿಯವರು ಮಾತನಾಡಿ, ದೇಶದಲ್ಲಿ ಹಿಂದುಗಳು ರಾಜಕೀಯ ಹಿತಾಸಕ್ತಿ ಬಿಟ್ಟು ಪ್ರತಿಯೊಬ್ಬರು ಒಂದಾಗಬೇಕಿದೆ.

ಹಿಂದುಗಳು ಉಳಿದರೆ ಮಾತ್ರ ದೇಶ ರಕ್ಷಣೆ ಮಾಡಲು ಸಾಧ್ಯವಾಗುತ್ತದೆ. ದೇಶದಲ್ಲಿ ಮತಾಂತರದ ಹಾವಳಿ ಹೆಚ್ಚಾಗಿದ್ದು, ಹಿಂದುಗಳು ಒಗ್ಗೂಡಿ ಇಂತಹ ಹಾವಳಿಗೆ ಬ್ರೇಕ್ ಹಾಕಬೇಕಿದೆ. ಪ್ರತಿಯೊಬ್ಬರು ತಾಳ್ಮೆ,ಶ್ರದ್ದೆ,ಅಭಯ ಈ ಮೂರು ಶಿವಾಜಿ ಮಹಾರಾಜರ ತತ್ವ ಆದರ್ಶಗಳನ್ನು ಪಾಲನೆ ಮಾಡುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.

ಮೆರವಣಿಗೆಯಲ್ಲಿ ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಗುರುಮಠಕಲ್ ಯುತ್ ಐಕಾನ್ ರಾಜರಾಮೇಶ ಗೌಡ, ಗುರುನಾಥ ತಲಾರಿ‌‌ ಮತ್ತಿತರರು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಗುರುಮಠಕಲ್ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.

ಓದಿ :ರಷ್ಯಾ-ಉಕ್ರೇನ್‌ ಯುದ್ಧ : ಪುಟಿನ್ ಹೆಚ್ಚು ಮಾರಕ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಬಹುದು ಎಂದ ಯುಕೆ ಸಚಿವರು

Last Updated : Feb 27, 2022, 8:17 PM IST

ABOUT THE AUTHOR

...view details