ಕರ್ನಾಟಕ

karnataka

ETV Bharat / state

ಯಾದಗರಿಯಲ್ಲಿ ಟಿಪ್ಪರ್​​​ ಹರಿದು 50ಕ್ಕೂ ಹೆಚ್ಚು ಕುರಿಗಳು ಸಾವು - Sheep death from Tipper Crash in Tinthani Beidge yadgir

ಮರಳು ಸಾಗಿಸುತ್ತಿದ್ದ ಟಿಪ್ಪರ್ ಹರಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕು ಬಂಡೋಳಿ ಗ್ರಾಮದ ತಿಂಥಣಿ ಬ್ರಿಡ್ಜ್​ ಬಳಿ ನಡೆದಿದೆ.

Sheep death from Tipper Crash in yadgir
ಟಿಪ್ಪರ್​ ಹರಿದು ಕುರಿಗಳು ಸಾವು

By

Published : Dec 20, 2019, 11:12 AM IST

ಯಾದಗಿರಿ:ಮರಳು ಸಾಗಿಸುತ್ತಿದ್ದ ಟಿಪ್ಪರ್ ಹರಿದು 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕು ಬಂಡೋಳಿ ಗ್ರಾಮದ ತಿಂಥಣಿ ಬ್ರಿಡ್ಜ್​ ಬಳಿ ನಡೆದಿದೆ.

ಟಿಪ್ಪರ್​ ಹರಿದು ಕುರಿಗಳು ಸಾವು

ಹುಣಸಗಿ ತಾಲೂಕಿನ ಕಮಲಾಪುರದಿಂದ ದೇವದುರ್ಗ ಕಡೆ ಸುಮಾರು 150 ಕುರಿಗಳನ್ನು ಕುರಿಗಾಹಿಗಳು ಮೇಯಿಸಲು ತೆರಳುತ್ತಿರುವಾಗ ರಭಸದಿಂದ ಬಂದ ಟಿಪ್ಪರ್ ಕುರಿ ಹಿಂಡಿನ ಮೇಲೆ ಹರಿದು ಈ ದುರ್ಘಟನೆ ಸಂಭವಿಸಿದೆ.

ಕಮಲಾಪುರ ಗ್ರಾಮದ ಭೀಮಣ್ಣ ಹೊಸಮನಿ, ದ್ಯಾಮಣ್ಣ ಹೊಸಮನಿ ಎಂಬವರಿಗೆ ಸೇರಿದ ಕುರಿಗಳಾಗಿದ್ದು, ತಾಳಿಕೋಟಿಯಿಂದ ರಾಯಚೂರು ಕಡೆ ವೇಗವಾಗಿ ಚಲಿಸುತ್ತಿದ್ದ ಟಿಪ್ಪರ್​ ಚಾಲಕನ ನಿಯಂತ್ರಣ ತಪ್ಪಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಬಳಿಕ ಚಾಲಕ ಟಿಪ್ಪರ್ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸುರಪುರ ತಹಶೀಲ್ದಾರ್​ ನಿಂಗಪ್ಪ ಬಿರದಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸುರಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details