ಸುರಪುರ: ಪಿಎಸ್ಐ ಚೇತನ್ ಅವರು ತಮ್ಮ ಜನ್ಮದಿನದ ಪ್ರಯುಕ್ತ ತಾಲೂಕಿನ ತಳವಾರಗೇರಾ ಗ್ರಾಮದಲ್ಲಿ ಬಡವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮಾದರಿಯಾಗಿದ್ದಾರೆ.
ಬಡವರಿಗೆ ದಿನಸಿ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪಿಎಸ್ಐ - ಬಡವರಿಗೆ ದಿನಸಿ ವಿತರಣೆ
ದಿನಸಿ ಸಾಮಗ್ರಿಗಳನ್ನ ಬಡವರಿಗೆ ವಿತರಿಸುವ ಮೂಲಕ ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಪಿಎಸ್ಐವೊಬ್ಬರು ಮಾದರಿಯಾಗಿದ್ದಾರೆ.

ಬಡವರಿಗೆ ದಿನಸಿ ವಿತರಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಪಿಎಸ್ಐ
ನಗರ ಠಾಣೆಯ ಪಿಎಸ್ಐ ಚೇತನ್, ತಮ್ಮ ಹುಟ್ಟುಹಬ್ಬ ಹಿನ್ನೆಲೆ ಬಡವರಿಗೆ ಹತ್ತು ದಿನಗಳಿಗೆ ಆಗುವಷ್ಟು ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸಾಬೂನು ಸೇರಿದಂತೆ ದಿನಸಿ ವಸ್ತುಗಳನ್ನು ನೀಡಿದರು.
ಪರಶುರಾಮ ನಾಟೇಕರ್, ತಿಗಳಪ್ಪ ಕವಡಿಮಟ್ಟಿ, ರಮೇಶ್ ಯಾದವ್, ಲಕ್ಷ್ಮಣ ಕವಡಿಮಟ್ಟಿ, ಬಸವರಾಜ ಹುಬ್ಬಳ್ಳಿ, ಪವನ್, ಚೇತನ್, ಆಕಾಶ, ರಾಜುಗೌಡ ಸೇವಾ ಸಮಿತಿಯ ಕಾರ್ಯಕರ್ತರು ಇದ್ದರು.