ಕರ್ನಾಟಕ

karnataka

ETV Bharat / state

ಮೀಸಲು ನೀಡದಿದ್ರೆ ವಾಲ್ಮೀಕಿ ಸಮಾಜದ 15 ಶಾಸಕರ ರಾಜೀನಾಮೆ: ಸಿಎಂಗೆ ಪ್ರಸನ್ನಾನಂದ ಶ್ರೀ ಎಚ್ಚರಿಕೆ - circuit house in yadagiri

ಯಾದಗಿರಿಯ ಸರ್ಕಿಟ್ ಹೌಸ್​ನಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿ, ಮಾಧ್ಯಮಗಳಿಗೆ ಮಾತನಾಡಿದ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ, ನಮ್ಮ ಸಮಾಜದ ಸಚಿವರಿಗೆ ಡಿಸಿಎಂ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದರು.

ಯಾದಗಿರಿ
ಯಾದಗಿರಿ

By

Published : Dec 23, 2019, 1:19 PM IST

ಯಾದಗಿರಿ:ಫೆಬ್ರವರಿ 8 ಹಾಗೂ 9ರಂದು ನಮ್ಮ ಮಠದ ಜಾತ್ರೆ ಇದೆ. ಅದೇ ಜಾತ್ರೆಯಲ್ಲಿ 7.5 ಮೀಸಲಾತಿ ಘೋಷಣೆಯಾಗಬೇಕು, 7.5 ಮೀಸಲಾತಿ ಶೀಘ್ರವಾಗಿ ಜಾರಿಯಾಗದಿದ್ದರೆ, ನಮ್ಮ ಸಮಾಜದ 15 ಶಾಸಕರು ಸಾಮೂಹಿಕವಾಗಿ ರಾಜೀನಾಮೆಗೆ ಸಿದ್ಧರಿದ್ದಾರೆ ಅಂತ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ

ಯಾದಗಿರಿಯ ಸರ್ಕಿಟ್ ಹೌಸ್​ನಲ್ಲಿ ಜಾತ್ರೆಯ ಪೋಸ್ಟರ್ ಬಿಡುಗಡೆಗೊಳಿಸಿ, ಮಾಧ್ಯಮಗಳಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ಸಮುದಾಯದ ಶಾಸಕರನ್ನು ಡಿಸಿಎಂ ಮಾಡುವ ಭರವಸೆ ನೀಡಿ ಹೈಜಾಕ್ ಮಾಡಿದ್ದಾರೆ. ಆದ್ರೆ ಸ್ಥಾನ ನೀಡಲು ಯಾಕೆ ತಡ ಮಾಡುತ್ತಿದ್ದಾರೋ ಗೊತ್ತಿಲ್ಲ. ನಮ್ಮ ಸಮಾಜದ ಸಚಿವರಿಗೆ ಡಿಸಿಎಂ ಸ್ಥಾನ ನೀಡಲೇಬೇಕು ಮತ್ತು ಸುರಪುರದ ಶಾಸಕ ರಾಜೂಗೌಡರಿಗೆ ಸಚಿವ ಸ್ಥಾನ ನೀಡಬೇಕುಎಂದು ಬಿಜೆಪಿ ನಾಯಕರಿಗೆ ಒತ್ತಾಯಿಸಿದ್ರು.

ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಪುರಿ ಸ್ವಾಮೀಜಿ

ಮರ್ಯಾದೆ ಪುರುಷ ಶ್ರೀರಾಮನ ಚರಿತ್ರೆಯನ್ನು ಜಗತ್ತಿಗೆ ಹೇಳಿದವರು ಮಹರ್ಷಿ ವಾಲ್ಮೀಕಿ. ಹೀಗಾಗಿ, ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣ ಮಾಡಬೇಕು ಮತ್ತು ಹಂಪಿ ವಿವಿಗೆ ಶ್ರೀ ಮಹರ್ಷಿ ವಾಲ್ಮೀಕಿ ವಿವಿ ಅಂತ ಮರುನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ರು. ಈಗಿರುವ ಇಂದಿರಾ ಕ್ಯಾಂಟಿನ್​ಗಳಿಗೆ ಅದೇ ಹೆಸರು ಇರಲಿ, ಆದ್ರೆ ಇನ್ನು ಮುಂದೆ ನಿರ್ಮಾಣ ಮಾಡುವ ಕ್ಯಾಂಟಿನ್​ಗಳಿಗೆ ವಾಲ್ಮೀಕಿ ಅನ್ನ ಕುಟೀರ ಎಂದು ನಾಮಕರಣ ಮಾಡಬೇಕು ಎಂದ್ರು.

ಪೇಜಾವರ ಶ್ರೀಗಳು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು,ಶೀಘ್ರ ಶ್ರೀಗಳು ಗುಣಮುಖರಾಗಲಿ ,ಪೇಜಾವರ ಶ್ರೀಗಳು ದೊಡ್ಡ ಸಂತರು. ಅವರು ಗುಣಮುಖರಾಗುವ ಮೂಲಕ ನಮ್ಮಂತಹ ಯುವ ಸ್ವಾಮಿಜಿಗಳಿಗೆ‌ ಮಾರ್ಗದರ್ಶನ ನೀಡಲಿ ಎಂದು ಪ್ರಾರ್ಥಿಸಿದರು.

ABOUT THE AUTHOR

...view details