ಸುರಪುರ: ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಗೆ ಹತ್ತಾರು ಎಕರೆ ಪಪ್ಪಾಯಿ ಬೆಳೆಗೆ ಹಾನಿಯಾಗಿದೆ. ಸಿಡಿಲು ಬಡಿದು ಜಾನುವಾರು ಸಾವನ್ನಪ್ಪಿದ್ದು, ರೈತ ಕಂಗಾಲಾಗಿದ್ದಾನೆ.
ನಿನ್ನೆ ರಾತ್ರಿ ಸುರಿದ ಅಕಾಲಿಕ ಮಳೆಗೆ ತಾಲೂಕಿನ ಹೆಮ್ಮಡಗಿ, ಚಂದ್ಲಾಪುರ, ದೇವತ್ಕಲ್, ಹಾಲಬಾವಿ ಸೇರಿ ಅನೇಕ ಗ್ರಾಮಗಳಲ್ಲಿ ರೈತರು ಬೆಳೆದ ಪಪ್ಪಾಯಿ ಗಿಡಗಳು ಗಾಳಿಯಿಂದ ನೆಲಕಚ್ಚಿವೆ. ಚಂದ್ಲಾಪುರ ಗ್ರಾಮದ ಬಳಿಯ ಹಸನಾಪುರ ಗ್ರಾಮದ ಜಗದೀಶ್ ನಂಬಾ ಎಂಬುವರ ಹೊಲದಲ್ಲಿ ಪಪ್ಪಾಯಿ ಗಿಡಗಳು ನೆಲಕ್ಕುರಳಿರುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಫಸಲು ಮಣ್ಣು ಪಾಲಾಗಿದೆ.