ಕರ್ನಾಟಕ

karnataka

ಸುರಪುರ: ಬಸವ ಸಾಗರ ಜಲಾಶಯಕ್ಕೆ ಭೇಟಿ ನೀಡಿದ ಶಾಸಕ ರಾಜುಗೌಡ

By

Published : Jul 12, 2020, 5:04 PM IST

ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿನ ಬಸವ ಸಾಗರ ಜಲಾಶಯಕ್ಕೆ ಶಾಸಕ ರಾಜುಗೌಡ (ನರಸಿಂಹ ನಾಯಕ) ಇಂದು ಭೇಟಿ ನೀಡಿ ಜಲಾಶಯದ ಗೇಟ್‌ಗೆ ಪೂಜೆ ಸಲ್ಲಿಸಿದರು.

Surapur
ಬಸವ ಸಾಗರ ಜಲಾಶಯ

ಸುರಪುರ: ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿನ ಬಸವ ಸಾಗರ ಜಲಾಶಯಕ್ಕೆ ಶಾಸಕ ರಾಜುಗೌಡ (ನರಸಿಂಹ ನಾಯಕ) ಇಂದು ಭೇಟಿ ನೀಡಿದರು.

ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಕಾರಣದಿಂದ ಕೃಷ್ಣಾ ನದಿಗೆ ಒಳ ಹರಿವು ಹೆಚ್ಚಾಗಿದ್ದು ಆಲಮಟ್ಟಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದ ಆಲಮಟ್ಟಿ ಜಲಾಶಯ ತುಂಬುತ್ತಿದ್ದು, ನದಿಗೆ ನೀರು ಹರಿಬಿಟ್ಟಿದ್ದರಿಂದ ನಾರಾಯಣಪುರ ಜಲಾಶಯಕ್ಕೂ ಒಳ ಹರಿವು ಹೆಚ್ಚಾಗಿದೆ. ಇದರಿಂದ ಡ್ಯಾಂ ಭರ್ತಿಯಾಗುತ್ತಿದ್ದುದರಿಂದ ನದಿಗೆ ನೀರು ಹರಿಬಿಡಲಾಗುತ್ತಿದೆ.

ಬಸವ ಸಾಗರ ಜಲಾಶಯಕ್ಕೆ ಭೇಟಿ ನೀಡಿದ ಶಾಸಕ ರಾಜುಗೌಡ

ಇಂದು ಶಾಸಕ ರಾಜುಗೌಡ ಭೇಟಿ ನೀಡಿದ ಸಮಯದಲ್ಲಿ ಜಲಾಶಯದ ಗೇಟ್‌ಗೆ ಪೂಜೆ ಸಲ್ಲಿಸಲಾಯಿತು. ನಂತರ ಮೊದಲ ಗೇಟ್ ತೆಗೆದು ಸುಮಾರು 23 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ ಎಂದು ತಿಳಿದು ಬಂದಿದೆ.

ಬಳಿಕ ಮಾತನಾಡಿದ ಶಾಸಕ ರಾಜುಗೌಡ, ಈ ಬಾರಿ ಮುಂಗಾರು ಶುಭಾರಂಭ ಮಾಡಿದ್ದು ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗೆ ಉತ್ತೇಜನ ಬಂದಿದೆ‌. ಈಗ ಜಲಾಶಯಕ್ಕೂ ಒಳಹರಿವು ಹೆಚ್ಚಿದ್ದರಿಂದ ರೈತರಿಗೆ ಮತ್ತಷ್ಟು ಅನುಕೂಲವಾಗಿದೆ ಎಂದರು.

ABOUT THE AUTHOR

...view details