ಕರ್ನಾಟಕ

karnataka

ETV Bharat / state

CAA ಜಾರಿಯಾದರೆ ರಾಹುಲ್ ಗಾಂಧಿ ಅಡ್ರೆಸ್​ ಇಲ್ಲದೆ ಇಟಲಿಗೆ ಹೋಗಬೇಕಾಗುತ್ತೆ: ರಾಜುಗೌಡ - ಬಿಜೆಪಿ ಶಾಸಕ ರಾಜುಗೌಡ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್​ ಯಾದಗಿರಿ

ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೆಸ್​ ಮುಖಂಡರಿಗೆ ಈಗ ಬೇರೆಯದೇ ಚಿಂತೆ ಶುರುವಾಗಿದೆ. ಸಿಎಎ ಹಾಗೂ ಎನ್​ಆರ್​ಸಿ ಅನುಷ್ಠಾನಗೊಂಡರೇ ರಾಹುಲ್​ ಗಾಂಧಿ ಅವರಿಗೆ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಶಾಸಕ ರಾಜುಗೌಡ ಅವರು ಸಿಎಎ ಕುರಿತು ಆಯೋಜಿದ್ದ ಜನಜಾಗೃತಿ ಅಭಿಯಾನದಲ್ಲಿ ಲೇವಡಿ ಮಾಡಿದರು.

MLA Raju Gowda
ಶಾಸಕ ರಾಜುಗೌಡ

By

Published : Jan 12, 2020, 5:28 AM IST

ಯಾದಗಿರಿ:ಸಿಎಎ ಮತ್ತು ಎನ್​ಆರ್​ಸಿ ಜಾರಿಯಾದರೇ ರಾಹುಲ್ ಗಾಂಧಿ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಶಾಸಕ ರಾಜುಗೌಡ ವ್ಯಂಗ್ಯವಾಡಿದರು.

ಸಿಎಎ ಕುರಿತು ಆಯೋಜಿದ್ದ ಜನಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಶಾಸಕ ರಾಜುಗೌಡ

ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಆಯೋಜಿದ್ದ ಜನ ಜಾಗೃತಿ ಅಭಿಯಾನದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೆಸ್​ ಮುಖಂಡರಿಗೆ ಈಗ ಬೇರೆಯದೇ ಚಿಂತೆ ಶುರುವಾಗಿದೆ. ಸಿಎಎ ಹಾಗೂ ಎನ್​ಆರ್​ಸಿ ಅನುಷ್ಠಾನಗೊಂಡರೇ ರಾಹುಲ್​ ಗಾಂಧಿ ಅವರಿಗೆ ಇಲ್ಲಿಯ ಅಡ್ರಸ್​ ಇಲ್ಲದಂತಾಗಿ ಇಟಲಿಗೆ ಹೋಗಬೇಕಾಗುತ್ತದೆ ಎಂದು ಲೇವಡಿ ಮಾಡಿದರು.

ಕಾಗ್ರೆಸ್​ನವರು ತಮ್ಮ ನಾಯಕ ಹೊರ ಹೋಗಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ಪೌರತ್ವ ತಿದ್ದುಪಡೆ ಕಾಯ್ದೆಗೆ ವಿರೋಧಿಸುತ್ತಿದ್ದರೆ. ಮುಸ್ಲಿಮರು ಇಲ್ಲಿಯೇ ಹುಟ್ಟಿದ್ದೇವೆ, ಇಲ್ಲಿಯೇ ಸಾಯುತ್ತೇವೆ ಎನ್ನುತ್ತಿದ್ದಾರೆ. ಅವರು ಎಲ್ಲಿಗೂ ಹೋಗುವ ಅಗತ್ಯ ಇಲ್ಲ. ಕಾಯ್ದೆ ಜಾರಿಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಮೋದಿ ಅವರನ್ನು ನೆರವಾಗಿ ಎದುರಸಲು ಆಗದ ಕಾಂಗ್ರೆಸ್​ನವರು ಸಿಎಎ ವಿಚಾರವನ್ನು ಮುಂದಿಟ್ಟುಕೊಂಡು ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ಕೆಲವು ಪಕ್ಷದವರಲ್ಲಿ ಮಾತ್ರ. ಸಿಎಎ ಬಗ್ಗೆ ಕಾಂಗ್ರೆಸ್​ಗೆ ತಿಳಿ ಹೇಳಲು ವಿಶೇಷ ಕ್ಲಾಸ್ ತೆಗೆದುಕೊಳ್ಳಬೇಕಿದೆ. ವಿಶೇಷ ಕ್ಲಾಸ್ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡುತ್ತೇನೆ ಎಂದು ರಾಜುಗೌಡ ಹೇಳಿದರು.

For All Latest Updates

ABOUT THE AUTHOR

...view details