ಕರ್ನಾಟಕ

karnataka

ETV Bharat / state

ಕರ್ನಾಟಕ ಭೂ ಸೇನಾ ನಿಗಮದ ನಿರ್ಲಕ್ಷ್ಯ ಆರೋಪ: 17 ವರ್ಷ ಕಳೆದರೂ ಪೂರ್ಣಗೊಳ್ಳದ ಬಸ್ ನಿಲ್ದಾಣ - ಕರ್ನಾಟಕ ಭೂ ಸೇನಾ ನಿಗಮದ ನಿರ್ಲಕ್ಷ್ಯ

ಕಕ್ಕೇರಾ ಗ್ರಾಮದ ರೈತ ಹೋರಾಟಗಾರ ನಂದಣ್ಣ ಎಂಬುವರು ಒಂದು ಎಕರೆ ಜಮೀನು ನೀಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಆದರೆ ಕಾಮಗಾರಿ ನಿರ್ಮಾಣದ ಹೊಣೆಹೊತ್ತ ಕರ್ನಾಟಕ ಭೂ ಸೇನಾ ನಿಗಮದ ಅಧಿಕಾರಿಗಳು ಕಳೆದ 17 ವರ್ಷವಾದರೂ ಸಂಪೂರ್ಣ ಕಾಮಗಾರಿ ಮುಗಿಸದೆ ಅರ್ಧಂಬರ್ಧ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದರಿಂದ ಈಗ ಬಸ್ ನಿಲ್ದಾಣ ದನಗಳ ದೊಡ್ಡಿಯಾಗಿ ಮಾರ್ಪಟ್ಟಿದೆ.

Kakkera Bus Stand not been completed for 17 years
ಕರ್ನಾಟಕ ಭೂ ಸೇನಾ ನಿಗಮದ ನಿರ್ಲಕ್ಷ್ಯ, 17 ವರ್ಷ ಕಳೆದರೂ ಪೂರ್ಣಗೊಳ್ಳದ ಬಸ್ ನಿಲ್ದಾಣ

By

Published : Sep 13, 2020, 2:05 PM IST

ಸುರಪುರ:ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಯೋಜನೆಗಳು, ವಿಶೇಷ ಅನುದಾನ ನೀಡಿ ಅವಶ್ಯಕ ಕಾಮಗಾರಿಗಳ ನಿರ್ಮಾಣಕ್ಕೆ ಮುಂದಾಗುತ್ತದೆ. ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕ ಭೂ ಸೇನಾ ನಿಗಮದ ನಿರ್ಲಕ್ಷ್ಯ ಆರೋಪ... 17 ವರ್ಷ ಕಳೆದರೂ ಪೂರ್ಣಗೊಳ್ಳದ ಬಸ್ ನಿಲ್ದಾಣ

2001-02ನೇ ಸಾಲಿನಲ್ಲಿ ಅಂದಿನ ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾಗಿದ್ದ ವೆಂಕಟೇಶ ನಾಯಕ ಅರಕೇರಿ ಅವರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ಸುರಪುರ ತಾಲೂಕಿನ ಕಕ್ಕೇರಾದಲ್ಲಿ ಬಸ್ ನಿಲ್ದಾಣವನ್ಞು ನಿರ್ಮಿಸಲಾಗಿದೆ.

ಅದೇ ಕಕ್ಕೇರಾ ಗ್ರಾಮದ ರೈತ ಹೋರಾಟಗಾರ ನಂದಣ್ಣ ಎಂಬುವರು ಒಂದು ಎಕರೆ ಜಮೀನು ನೀಡಿ ಬಸ್ ನಿಲ್ದಾಣ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ಆದರೆ ಕಾಮಗಾರಿ ನಿರ್ಮಾಣ ಹೊಣೆಹೊತ್ತ ಕರ್ನಾಟಕ ಭೂ ಸೇನಾ ನಿಗಮದ ಅಧಿಕಾರಿಗಳು ಕಳೆದ 17 ವರ್ಷವಾದರೂ ಸಂಪೂರ್ಣ ಕಾಮಗಾರಿ ಮುಗಿಸದೆ ಅರ್ಧಂಬರ್ಧ ಕಾಮಗಾರಿ ಮಾಡಿ ಕೈ ತೊಳೆದುಕೊಂಡಿದ್ದರಿಂದ ಈಗ ಬಸ್ ನಿಲ್ದಾಣ ದನಗಳ ದೊಡ್ಡಿಯಾಗಿ ಮಾರ್ಪಟ್ಟಿದೆ.

ನಿರ್ಮಿಸಿರುವ ಕಾಮಗಾರಿಯೂ ಕಳಪೆ ಗುಣಮಟ್ಟದ್ದು ಎನ್ನುವುದಕ್ಕೆ, ತುಕ್ಕು ಹಿಡಿದ ಕಿಟಕಿಗಳು, ಉದುರಿರುವ ಸಿಮೆಂಟ್ ನೋಡಿದರೆ ಎಂತವರಿಗೂ ಅರ್ಥವಾಗಲಿದೆ. ಅಲ್ಲದೆ ಬಸ್ ನಿಲ್ದಾಣ ನಿರ್ಮಿಸಿ ಅದರೊಳಗೆ ಜನರು ಕುಳಿತುಕೊಳ್ಳಲು ಒಂದು ಆಸನವೂ ಇಲ್ಲದಂತಾಗಿದೆ.

ಈಗ ಬಸ್ ನಿಲ್ದಾಣವನ್ನು ಜನರು ದನಗಳಿಗೆ ಹಾಕುವ ಹುಲ್ಲು ಮತ್ತು ಉರವಲು ಕಟ್ಟಿಗೆ‌ ಹಾಕಲು ಬಳಸುತ್ತಿದ್ದಾರೆ. ಅಲ್ಲದೆ ದನ ಕುರಿ ಮೇಕೆಗಳ ನಿಲ್ಲಿಸಲು ಕೊಂಡಾಡಿ ದೊಡ್ಡಿ ಮಾಡಿಕೊಳ್ಳಲಾಗಿದೆ. ಜೊತೆಗೆ ಈ ಸ್ಥಳವೇ ಕೆಲವರಿಗೆ ಮಲ ಮೂತ್ರ ವಿಸರ್ಜನೆಯ ತಾಣವಾಗಿರುವುದು ಬೇಸರದ ಸಂಗತಿಯಾಗಿದೆ.

ಇನ್ನಾದರೂ ಸರ್ಕಾರ ಮತ್ತು ಸ್ಥಳೀಯ ಶಾಸಕರು ಈ ಅರ್ಧಂಬರ್ಧ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಂಡು ಸಾರ್ವಜನಿಕರ ಉಪಯೋಗಕ್ಕೆ ಕಲ್ಪಿಸಬೇಕೆಂಬುದು ಕಕ್ಕೇರಾ ಜನರ ಒತ್ತಾಯವಾಗಿದೆ.

ABOUT THE AUTHOR

...view details