ಯಾದಗಿರಿ:ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ಪುಂಡಾಟಿಕೆ ಮೆರದ ಶಿವಸೇನಾ ಕಾರ್ಯಕರ್ತರನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ನಗರದಲ್ಲಿಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಿವಸೇನಾ ಕಾರ್ಯಕರ್ತರನ್ನ ಕೂಡಲೇ ಬಂಧಿಸಿ: ಕನ್ನಡಪರ ಸಂಘಟನೆಯಿಂದ ಭಾರಿ ಪ್ರತಿಭಟನೆ - ಯಾದಗಿರಿಯಲ್ಲಿ ಕನ್ನಡಪರ ಸಂಘಟನೆಯಿಂದ ಬಾರಿ ಪ್ರತಿಭಟನೆ
ಕನ್ನಡ ಬಾವುಟಕ್ಕೆ ಬೆಂಕಿ ಇಟ್ಟು ಪುಂಡಾಟಿಕೆ ಮೆರದ ಶಿವಸೇನಾ ಕಾರ್ಯಕರ್ತರನ್ನ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಯಾದಗಿರಿ ನಗರದಲ್ಲಿಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
![ಶಿವಸೇನಾ ಕಾರ್ಯಕರ್ತರನ್ನ ಕೂಡಲೇ ಬಂಧಿಸಿ: ಕನ್ನಡಪರ ಸಂಘಟನೆಯಿಂದ ಭಾರಿ ಪ್ರತಿಭಟನೆ Immediate-arrest-of-shiv-sena-activists-protests-by-kannada-organization-in-yadgiri](https://etvbharatimages.akamaized.net/etvbharat/prod-images/768-512-5571040-thumbnail-3x2-sanju.jpg)
ಶಿವಸೇನಾ ಕಾರ್ಯಕರ್ತರನ್ನ ಕೂಡಲೇ ಬಂಧಿಸಿ; ಕನ್ನಡಪರ ಸಂಘಟನೆಯಿಂದ ಬಾರಿ ಪ್ರತಿಭಟನೆ...
ಶಿವಸೇನಾ ಕಾರ್ಯಕರ್ತರನ್ನ ಕೂಡಲೇ ಬಂಧಿಸಿ; ಕನ್ನಡಪರ ಸಂಘಟನೆಯಿಂದ ಬಾರಿ ಪ್ರತಿಭಟನೆ
ನಗರದ ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ನಂತರ ಭಾವಚಿತ್ರಕ್ಕೆ ಬೆಂಕಿ ಹಚ್ಚುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಗಡಿ ವಿಚಾರವಾಗಿ ಉದ್ಧವ್ ಸರ್ಕಾರ ತಂಟೆ ತೆಗೆಯುತ್ತಿದೆ. ಪುಂಡ ಶಿವಸೇನೆ ಹದ್ದು ಮೀರಿ ವರ್ತನೆ ನಡೆಸಿದ್ದು, ಇತ್ತೀಚೆಗೆ ಕೊಲ್ಲಾಪುರ ಬಳಿ ಬಾವುಟಕ್ಕೆ ಬೆಂಕಿ ಹಚ್ಚಿದ್ರು. ಇದರಿಂದಾಗಿ ಕನ್ನಡ ಮನಸ್ಸುಗಳಿಗೆ ನೋವಾಗಿದೆ. ಹೀಗಾಗಿ ಬೆಂಕಿಹಚ್ಚಿದ ಪುಂಡರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.