ಯಾದಗಿರಿ:ಮಳೆ ಅವಾಂತರದಿಂದ ಮನೆ ಕುಸಿದ ಹಿನ್ನೆಲೆ ಕುಟುಂಬವೊಂದು ಬೀದಿಯಲ್ಲಿ ಬದುಕು ಸಾಗಿಸುತ್ತಿದೆ. ಜಿಲ್ಲೆಯ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಗಾಳೆಪ್ಪ ಎಂಬುವವರ ಮನೆ 9 ದಿನದ ಹಿಂದೆ ಭಾರಿ ಮಳೆ ಸುರಿದ ಹಿನ್ನೆಲೆ ಮನೆ ಕುಸಿದಿತ್ತು.
ಮನೆಯಲ್ಲಿರುವ ವಸ್ತುಗಳಿಗೂ ಕೂಡ ಹಾನಿಯಾಗಿದೆ. ಪರಿಣಾಮ ಕಳೆದ 9 ದಿನಗಳಿಂದ ಬಾಣಂತಿ, ಮಗು ಸೇರಿ 7 ಜನ ಮನೆ ಬಿದ್ದ ಜಾಗದ ಪ್ರದೇಶದ ಮುಂಭಾಗದಲ್ಲಿ ಆಶ್ರಯ ಕಲ್ಪಿಸಿಕೊಂಡಿದ್ದಾರೆ.