ಕರ್ನಾಟಕ

karnataka

ETV Bharat / state

ಜನರಿಗೆ ಕೊರೊನಾ, ಜಾನುವಾರುಗಳಿಗೆ ಲಂಪಿಸ್ಕಿನ್: ದನಕರುಗಳಿಗೂ ಕ್ವಾರಂಟೈನ್​ ಆತಂಕದಲ್ಲಿ ರೈತರು - ಗುರುಮಠಕಲ್ ತಾಲೂಕಿನ ಹಳ್ಳಿಗಳಲ್ಲಿ ಹೆಚ್ಚಾಗಿ ಜಾನುವಾರುಗಳಲ್ಲಿ ರೋಗ

ಗುರುಮಠಕಲ್ ತಾಲೂಕಿನ ಹಳ್ಳಿಗಳಲ್ಲಿ ಹೆಚ್ಚಾಗಿ ಜಾನುವಾರುಗಳಲ್ಲಿ ರೋಗ ಉಲ್ಬಣವಾಗಿದೆ. ಏಕೆಂದರೆ ತೆಲಂಗಾಣ ಗಡಿ ಹಂಚಿಕೊಂಡಿದ್ದರಿಂದ ತೆಲಂಗಾಣದಲ್ಲಿ ಹೆಚ್ಚು ಆವರಿಸಿಕೊಂಡಿರುವ ಲಂಪಿ ಚರ್ಮ ರೋಗ ಜಿಲ್ಲೆಗೂ ಎಂಟ್ರಿ ಕೊಟ್ಟಿದೆ ಅಂತಾ ಹೇಳಲಾಗುತ್ತಿದೆ. ಬಹು ವರ್ಷಗಳ ಬಳಿಕ ವಕ್ಕರಿಸಿಕೊಂಡ ಲಂಪಿ ಚರ್ಮ ರೋಗಕ್ಕೆ ಈಗಾಗ್ಲೇ ಜಿಲ್ಲೆಯಲ್ಲಿ ಸಾವಿರದ ಐನೂರಕ್ಕೂ ಅಧಿಕ ಜಾನುವಾರುಗಳು ತುತ್ತಾಗಿವೆ. ಅಷ್ಟಕ್ಕೂ ಲಂಪಿ ಚರ್ಮ ಜಾನುವಾರುಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತೆ ಅಂದರೆ ಚರ್ಮದ ಮೇಲೆ ಗುಳ್ಳೆಗಳಾಗುವುದ, ಏಕಾಏಕಿ ಜಾನುವಾರುಗಳು ನಿಶಕ್ತವಾಗುವುದು, ಬಾಯಿಯಿಂದ ಜೊಲ್ಲು ಹಾಕುವುದು ಮತ್ತು ಕಣ್ಣಿನಿಂದ ನೀರು ಹನಿ ಸೋರುವುದು ರೋಗದ ಲಕ್ಷಣಗಳು ಅಂತಾ ವೈದ್ಯರು ಹೇಳುತ್ತಿದ್ದಾರೆ.

Farmers in Lumpiskin disease anxiety for cows
ಜನರಿಗೆ ಕೊರೊನಾ, ಜಾನುವಾರುಗಳಿಗೆ ಲಂಪಿಸ್ಕಿನ್ ರೋಗ, ಆತಂಕದಲ್ಲಿ ರೈತರು

By

Published : Sep 6, 2020, 2:42 PM IST

ಯಾದಗಿರಿ: ಹೆಮ್ಮಾರಿ ಕೊರೊನಾದಿಂದಾಗಿ ಕ್ವಾರಂಟೈನ್ ಮಾಡುವುದು ಕಳೆದ ಐದಾರು ತಿಂಗಳಿನಿಂದ ನಡೆಯುತ್ತಿದೆ. ಆದರೆ ಈಗ ರಾಜ್ಯದಲ್ಲಿ ಜಾನುವಾರುಗಳಿಗೆ ಕ್ವಾರಂಟೈನ್ ಮಾಡುವಂತ ಪರಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಜನರಂತೆ ಜಾನುವಾರುಗಳಿಗೂ ಒಂದರಿಂದ ಒಂದಕ್ಕೆ ಹರಡುವ ರೋಗ ಬಂದಾಗಿದೆ. ಇದೆ ಕಾರಣದಿಂದ ಆ ಜಿಲ್ಲೆಯ ರೈತರು ಅಕ್ಷರಶ ಆತಂಕದಲ್ಲಿದ್ದಾರೆ. ಸಾವಿರಾರು ರೂ. ಖರ್ಚು ಮಾಡಿ ತಂದಂತಹ ಜಾನುವಾರುಗಳಿಗೆ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂದು ರೈತರು ಭಯಭೀತರಾಗಿದ್ದಾರೆ.

ಜನರಿಗೆ ಕೊರೊನಾ, ಜಾನುವಾರುಗಳಿಗೆ ಲಂಪಿಸ್ಕಿನ್ ರೋಗ, ಆತಂಕದಲ್ಲಿ ರೈತರು

ಜನರಿಗೆ ಕೊರೊನಾ ಜಾನುವಾರುಗಳಿಗೆ ಲಂಪಿಸ್ಕಿನ್ ರೋಗ.. ನೋಡ ನೋಡುತ್ತಿದಂತೆ ಜಾನುವಾರುಗಳಿಗೆ ಉಲ್ಬಣಿಸುತ್ತಿರುವ ರೋಗ.. ರೋಗದಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುತ್ತಿರುವ ರೈತರು. ಇನ್ನೊಂದು ಕಡೆ ಕುಳಿತಲ್ಲೇ ಜೊಲ್ಲು ಸುರಿಸುತ್ತಿರುವ ಜಾನುವಾರುಗಳು. ಹೌದು ಯಾದಗಿರಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೊನಾ ರಣಕೇಕೆ ಹಾಕುತ್ತಿದ್ದು, ಸಾವಿರಾರು ಮಂದಿ ಕೊರೊನಾಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈಗ ಜಾನುವಾರುಗಳಿಗೆ ಅಂತದೆ ರೋಗ ವಕ್ಕರಿಸಿಕೊಂಡಿದ್ದರಿಂದ ಜಿಲ್ಲೆಯ ರೈತರಲ್ಲಿ ಆತಂಕ ಶುರುವಾಗಿದೆ.

ಅಷ್ಟಕ್ಕೂ ಜಿಲ್ಲೆಯ ಗುರುಮಠಕಲ್ ತಾಲೂಕಿನ ಹಳ್ಳಿಗಳಲ್ಲಿ ಹೆಚ್ಚಾಗಿ ಜಾನುವಾರುಗಳಲ್ಲಿ ರೋಗ ಉಲ್ಬಣವಾಗಿದೆ. ಏಕೆಂದರೆ ತೆಲಂಗಾಣ ಗಡಿ ಹಂಚಿಕೊಂಡಿದ್ದರಿಂದ ತೆಲಂಗಾಣದಲ್ಲಿ ಹೆಚ್ಚು ಆವರಿಸಿಕೊಂಡಿರುವ ಲಂಪಿ ಚರ್ಮ ರೋಗ ಜಿಲ್ಲೆಗೂ ಎಂಟ್ರಿ ಕೊಟ್ಟಿದೆ ಅಂತಾ ಹೇಳಲಾಗುತ್ತಿದೆ. ಬಹು ವರ್ಷಗಳ ಬಳಿಕ ವಕ್ಕರಿಸಿಕೊಂಡ ಲಂಪಿ ಚರ್ಮ ರೋಗಕ್ಕೆ ಈಗಾಗ್ಲೇ ಜಿಲ್ಲೆಯಲ್ಲಿ ಸಾವಿರದ ಐನೂರಕ್ಕೂ ಅಧಿಕ ಜಾನುವಾರುಗಳು ತುತ್ತಾಗಿವೆ. ಅಷ್ಟಕ್ಕೂ ಲಂಪಿ ಚರ್ಮ ಜಾನುವಾರುಗಳಲ್ಲಿ ಹೇಗೆ ಕಾಣಿಸಿಕೊಳ್ಳುತ್ತೆ ಅಂದರೆ ಚರ್ಮದ ಮೇಲೆ ಗುಳ್ಳೆಗಳಾಗುವುದ, ಏಕಾಏಕಿ ಜಾನುವಾರುಗಳು ನಿಶಕ್ತವಾಗುವುದು, ಬಾಯಿಯಿಂದ ಜೊಲ್ಲು ಹಾಕುವುದು ಮತ್ತು ಕಣ್ಣಿನಿಂದ ನೀರು ಹನಿ ಸೋರುವುದು ರೋಗದ ಲಕ್ಷಣಗಳು ಅಂತಾ ವೈದ್ಯರು ಹೇಳುತ್ತಿದ್ದಾರೆ. ಆದರೆ ಈ ರೋಗದಿಂದ ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದು ರೈತರಲ್ಲಿ ಸಾಕಷ್ಟು ಆತಂಕ ಮೂಡಿದೆ.

ಇನ್ನು ಜಿಲ್ಲೆಯಲ್ಲಿ ವ್ಯಾಪಕವಾಗಿ ಈ ಲಂಪಿ ಚರ್ಮ ರೋಗ ಜಾನುವಾರುಗಳಲ್ಲಿ ವ್ಯಾಪಕವಾಗಿ ಹರಡಿದ್ದರಿಂದ ಜಿಲ್ಲೆಯ ಪಶು ವೈದ್ಯರು ಹೆಚ್ಚಾಗಿ ರೋಗ ಕಂಡು ಬಂದ ಗ್ರಾಮಗಳಿಗೆ ರೋಗಿ ಜಾನುವಾರುಗಳಿಗೆ ಚಿಕಿತ್ಸೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಇನ್ನು ರೋಗಕ್ಕೆ ತುತ್ತಾಗಿರುವ ಜಾನುವಾರುಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಕೊಳ್ಳುವ ಆಹಾರವನ್ನ ನೀಡುತ್ತಿದ್ದಾರೆ. ಇನ್ನೊಂದು ವಿಶೇಷ ಏನೆಂದರೆ ಈ ಮಾಹಾಮಾರಿ ರೋಗ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರುಗಳಿಗೆ ಹರಡುತ್ತಿರುವ ಹಿನ್ನೆಲೆ ಇದರಿಂದ ಬಚಾವ್ ಆಗಬೇಕಾದರೆ ರೋಗಕ್ಕೆ ತುತ್ತಾಗಿರುವ ಜಾನುವಾರುಗಳನ್ನು ಪ್ರತ್ಯೇಕಿಸುವುದು ಒಂದೇ ಉಪಾಯ.

ಇನ್ನು ಹೆಚ್ಚಾಗಿ ಈ ರೋಗ ಹಸುಗಳಲ್ಲೇ ಕಾಣಿಸಿಕೊಳ್ಳುತ್ತಿದೆ ಹೀಗಾಗಿ ರೈತರಲ್ಲಿ ಹೆಚ್ಚಾಗಿರುವ ಹಸುಗಳನ್ನ ರಕ್ಷಣೆ ಮಾಡಿಕೊಳ್ಳದೆ ದೊಡ್ಡ ಸವಾಲಾಗಿದೆ. ಇನ್ನು ರೈತರಲ್ಲಿ ಹಸುಗಳ ಜೊತೆಗೆ ಬೇರೆ ಬೇರೆ ಜಾನುವಾರುಗಳು ಇರುವ ಕಾರಣಕ್ಕೆ ಪ್ರತ್ಯೇಕಿಸುವುದೆ ಕಷ್ಟವಾಗಿದೆ. ಒಂದು ವೇಳೆ ರೋಗಕ್ಕೆ ತುತ್ತಾಗಿರುವ ಜಾನುವಾರುಗಳನ್ನ ಪ್ರತ್ಯೇಕಿಸದೆ ಇದ್ದರೆ ಉಳಿದಂತ ಜಾನುವಾರುಗಳಿಗೆ ರೋಗ ವಕ್ಕರಿಸಿಕೊಳ್ಳುತ್ತೆದೆ. ಈ ಬಗ್ಗೆ ಮಾತನಾಡಿರುವ ಪಶುಸಂಗೋಪನಾ ಸಚಿವರಾದಂತಹ ಪ್ರಭು ಚವ್ಹಾಣ ಅವರು ಈಗಾಗಲೇ ಈ ರೋಗ ನಿಯಂತ್ರಣಕ್ಕಾಗಿ ಇಲಾಖೆ ವತಿಯಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ರೈತರು ಕೂಡ ತಮ್ಮ ರೋಗಲಕ್ಷಣಗಳು ಕಂಡು ಬಂದ ಜಾನುವಾರಗಳನ್ನ ಪ್ರತ್ಯೆಕವಾಗಿ ಇಡುವ ಮೂಲ‌ ಮುಂಜಾಗ್ರತೆ ವಹಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಕೊರೊನಾದಿಂದ ಬದುಕುಳಿಯಲು ಹೋರಾಟ ನಡೆಸುತ್ತಿದ್ದ ಜಿಲ್ಲೆಯ ರೈತರಿಗೆ ಲಂಪಿ ಚರ್ಮ ರೋಗ ಆಘಾತ ನೀಡಿದೆ. ಮಾತು ಬಾರದ ಜಾನುವಾರುಗಳಲ್ಲಿ ಉಲ್ಬಣಿಸುತ್ತಿದ್ದರಿಂದ ಮೂಖ ಪ್ರಾಣಿಗಳ ರೋದನೆ ಕೇಳತೀರದಾಗಿದೆ.

ABOUT THE AUTHOR

...view details