ಕರ್ನಾಟಕ

karnataka

ETV Bharat / state

ಹತ್ತಿ ಖರೀದಿದಾರರಿಂದ ರೈತರಿಗೆ ವಂಚನೆ ಆರೋಪ.. ಪ್ರಕರಣ ದಾಖಲು - ಯಾದಗಿರಿಯಲ್ಲಿ ಹತ್ತಿ ಖರೀದಿದಾರರಿಂದ ರೈತರಿಗೆ ವಂಚನೆ

ರೈತರಿಗೆ ವಂಚಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಹತ್ತಿ ಖರೀದಿದಾರರ ವಿರುದ್ಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

red
ಗ್ರಾಮೀಣ

By

Published : Nov 10, 2020, 7:56 PM IST

ಯಾದಗಿರಿ : ಹತ್ತಿ ಖರೀದಿದಾರರು ರೈತರಿಗೆ ವಂಚನೆ ಮಾಡುತ್ತಿರುವ ಆರೋಪದ ಮೇಲೆ ಇಬ್ಬರ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಿನ್ನೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ, ಹತ್ತಿ ಖರೀದಿ ಮಾಡುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಹತ್ತಿ ಖರೀದಿದಾರರಿಂದ ರೈತರಿಗೆ ಮೋಸ ಆಗುತ್ತಿರುವ ಕುರಿತು ಪತ್ತೆ ಹಚ್ಚುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಖಡಕ್ ಆಗಿ ಸೂಚಿಸಿದ್ದರು. ಈ ಹಿನ್ನೆಲೆ, ಕಂದಾಯ ಇಲಾಖೆಯ ಅಧಿಕಾರಿಗಳು ಇಂದು ವಿವಿಧೆಡೆ ತಪಾಸಣೆ ನಡೆಸಿದಾಗ, ಹತ್ತಿ ಖರೀದಿದಾರರು ರೈತರಿಂದ ಹೆಚ್ಚುವರಿ ಹಣ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಬ್ಬರು ಹತ್ತಿ ಖರೀದಿದಾರರ ವಿರುದ್ಧ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹತ್ತಿ ಖರೀದಿದಾರರಿಂದ ರೈತರಿಗೆ ವಂಚನೆ ಆರೋಪ.. ಪ್ರಕರಣ ದಾಖಲು

ತೂಕ ಹಾಗೂ ಅಳತೆ ಇಲಾಖೆಯ ಅಧಿಕಾರಿಗಳು ಜಿಲ್ಲೆಯ 20 ಸ್ಥಳಗಳಲ್ಲಿ ಹತ್ತಿ ತೂಕ ಯಂತ್ರಗಳ ತಪಾಸಣೆ ನಡೆಸಿದ್ದು, ತೂಕದಲ್ಲಿ ವಂಚಿಸುತ್ತಿದ್ದ 4 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ರೈತರಿಗೆ ಮೋಸ, ವಂಚನೆ ಮಾಡುವ ಪ್ರಕರಣಗಳು ಕಂಡು ಬಂದರೆ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿನ ಸಮಿತಿಗೆ ದೂರು ಸಲ್ಲಿಸಿ, ಪರಿಹಾರ ಕಂಡುಕೊಳ್ಳಲು ಕೋರಲಾಗಿದೆ..

ಜಿಲ್ಲೆಯಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ಕಂಡು ಬಂದರೆ ಸಂಬಂಧಿಸಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details