ಕರ್ನಾಟಕ

karnataka

ETV Bharat / state

ರಸ್ತೆಯಲ್ಲಿ ಟೀ ಕುಡಿದು ಹರಟೆ ಹೊಡೆದ ಸೋಂಕಿತ 16 ಪೊಲೀಸರು - ಪೊಲೀಸರಿಂದ ಕೊರೊನಾ ನಿಯಮ ಉಲ್ಲಂಘನೆ,

ಗುರುಮಠಕಲ್ ಪಟ್ಟಣದ ಸರ್ಕಲ್ ಇನ್ಸ್​​ಪೆಕ್ಟರ್ ಕಚೇರಿ ಎದುರು ಕೋವಿಡ್​ ಆಸ್ಪತ್ರೆಗೆ ಹೋಗುವ ಮುನ್ನ ಪಿಎಸ್​ಐ ಸೇರಿದಂತೆ 16 ಪೊಲೀಸರು ಟೀ ಕುಡಿದು ನಿರ್ಲಕ್ಷ್ಯ ತೋರಿರುವ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್​ನಲ್ಲಿ ನಡೆದಿದೆ.

corona Rule Violation, corona Rule Violation by police, corona Rule Violation news, ಕೊರೊನಾ ನಿಯಮ ಉಲ್ಲಂಘನೆ, ಪೊಲೀಸರಿಂದ ಕೊರೊನಾ ನಿಯಮ ಉಲ್ಲಂಘನೆ, ಗುರುಮಠಕಲ್​ನಲ್ಲಿ ಪೊಲೀಸರಿಂದ ಕೊರೊನಾ ನಿಯಮ ಉಲ್ಲಂಘನೆ,
ರಸ್ತೆಯಲ್ಲಿ ಟೀ ಕುಡಿದು ಬೇಜವಾಬ್ದಾರಿ ಮೆರೆದ ಸೋಂಕಿತ ಪಿಎಸ್​ಐ ಸೇರಿ 16 ಪೊಲೀಸರು

By

Published : Jul 14, 2020, 8:53 AM IST

ಗುರುಮಠಕಲ್ (ಯಾದಗಿರಿ): ಕೊರೊನಾ ಪಾಸಿಟಿವ್ ಹಿನ್ನೆಲೆ ಪಿಎಸ್​ಐ ಸೇರಿದಂತೆ 16 ಪೊಲೀಸರಿಗೆ ಕೋವಿಡ್ ಆಸ್ಪತ್ರೆಗೆ ತೆರಳಬೇಕಾಗಿತ್ತು. ಆದ್ರೆ ಆಸ್ಪತ್ರೆಗೆ ಹೋಗುವ ಮುನ್ನ ಅಧಿಕಾರಿ ಸೇರಿದಂತೆ ಸಿಬ್ಬಂದಿ ಸಹ ನಿರ್ಲಕ್ಷ್ಯ ತೋರಿರುವ ಘಟನೆ ಗುರುಮಠಕಲ್ ಪಟ್ಟಣದಲ್ಲಿ ನಡೆದಿದೆ.

ರಸ್ತೆಯಲ್ಲಿ ಟೀ ಕುಡಿದು ಬೇಜವಾಬ್ದಾರಿ ಮೆರೆದ ಸೋಂಕಿತ ಪಿಎಸ್​ಐ ಸೇರಿ 16 ಪೊಲೀಸರು

ನಿನ್ನೆ ಗುರುಮಠಕಲ್ ಪಿಎಸ್​ಐ ಸೇರಿದಂತೆ 16 ಪೊಲೀಸ್ ಸಿಬ್ಬಂದಿಗೆ ಕೊರೊನಾ ಧೃಡಪಟ್ಟಿದೆ. ಈಗಾಗಲೇ ಠಾಣೆಯನ್ನು ಸೀಲ್ ಡೌನ್ ಸಹ ಮಾಡಲಾಗಿದೆ. ಹೀಗಾಗಿ ಸಿಬ್ಬಂದಿಯನ್ನು ಕೋವಿಡ್ ಆಸ್ಪತ್ರೆಗೆ ಕರೆತರಲು ಸರ್ಕಾರಿ ಬಸ್ ಗುರುಮಠಕಲ್ ಪಟ್ಟಣಕ್ಕೆ ತೆರಳಿತ್ತು.

ಪಟ್ಟಣ ಸರ್ಕಲ್ ಇನ್ಸ್​​ಪೆಕ್ಟರ್ ಕಚೇರಿ ಎದುರು ಬಸ್ ನಿಂತಿದ್ದ ವೇಳೆ ಪೊಲೀಸರೆಲ್ಲರೂ ಬಸ್ ಪಕ್ಕದಲ್ಲಿದ್ದ ಟೀ ಅಂಗಡಿಗೆ ತೆರಳಿದ್ದಾರೆ. ತಮಗೆ ಕೊರೊನಾ ದೃಢಪಟ್ಟಿರುವುದು ಮರೆತು ಕೆಲ ಹೊತ್ತು ಟೀ ಕುಡಿಯುತ್ತಾ ಹರಟೆ ಹೊಡೆದಿದ್ದಾರೆ.

ಈ ಘಟನೆ ಪೊಲೀಸರ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಕನ್ನಡಿಯಾಗಿದೆ. ಪೊಲೀಸರ ನಡೆಗೆ ಜಿಲ್ಲೆಯಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.

ABOUT THE AUTHOR

...view details