ಕರ್ನಾಟಕ

karnataka

ETV Bharat / state

ಶಂಕರಾಚಾರ್ಯರ ಪುತ್ಥಳಿ ಮೇಲೆ ಅನ್ಯ ಧರ್ಮದ ಧ್ವಜ ಹಾರಿಸಿರುವುದಕ್ಕೆ ಖಂಡನೆ

ಶೃಂಗೇರಿಯಲ್ಲಿ ಸ್ವಾಗತ ಗೋಪುರದಲ್ಲಿರುವ ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮದ ಧ್ವಜವನ್ನು ಹಾರಿಸಿರುವ ಕಿಡಿಗೇಡಿಗಳು ಯಾರೇ ಆಗಿರಲಿ ಅವರನ್ನು ಕೂಡಲೇ ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

By

Published : Aug 14, 2020, 6:13 PM IST

ರಸ್ತೆದಾರ್ ನಾಸೀರ್ ಅಹ್ಮದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ
ರಸ್ತೆದಾರ್ ನಾಸೀರ್ ಅಹ್ಮದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ

ಸುರಪುರ : ನಗರದ ವಿಪ್ರ ಸಮಾಜ ಬಾಂಧವರು ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶೃಂಗೇರಿಯಲ್ಲಿ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಧ್ವಜ ಹಾರಿಸಿರುವುದನ್ನು ಖಂಡಿಸಿದರು.

ರಸ್ತೆದಾರ್ ನಾಸೀರ್ ಅಹ್ಮದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ

ಹಿಂದೂ ಸಮಾಜದ ಸಂಸ್ಥಾಪಕರಾದ ಆದಿ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯಧರ್ಮೀಯ ಧ್ವಜ ಹಾರಿಸಿ ನಮ್ಮ ಭಾವನೆಯನ್ನು ಅವಮಾನಿಸಲಾಗಿದೆ. ಶೃಂಗೇರಿಯಲ್ಲಿ ಸ್ವಾಗತ ಗೋಪುರದಲ್ಲಿರುವ ಶ್ರೀ ಆದಿ ಶಂಕರಾಚಾರ್ಯರ ಪುತ್ಥಳಿಯ ಮೇಲೆ ಅನ್ಯ ಧರ್ಮದ ಧ್ವಜವನ್ನು ಹಾರಿಸಿರುವ ಕಿಡಿಗೇಡಿಗಳು ಯಾರೇ ಆಗಿರಲಿ ಅವರನ್ನು ಕೂಡಲೇ ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ರಾಜ್ಯದಲ್ಲಿ ಮೇಲಿಂದ ಮೇಲೆ ವಿಪ್ರ ಸಮಾಜಕ್ಕೆ ಬೇಸರ ತರಿಸುವ ಸಂಗತಿಗಳು ನಡೆಯುತ್ತಲೇ ಇವೆ. ಸರ್ಕಾರ ಕೂಡಲೇ ಎಚ್ಚೆತ್ತು ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಶಿರಸ್ತೆದಾರ್ ನಾಸೀರ್ ಅಹ್ಮದ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ABOUT THE AUTHOR

...view details