ಯಾದಗಿರಿ :ಇಡೀ ದೇಶವೇ ಲಾಕ್ಡೌನ್ನಿಂದ ಸ್ತಬ್ಧವಾಗಿದೆ. ಈ ಸಂದರ್ಭದಲ್ಲಿ ಮಗು ಕಳೆದುಕೊಂಡ ಪೋಷಕರು ಶವ ಸಂಸ್ಕಾರ ಮಾಡಲು ಪರದಾಡುತ್ತಿದ್ದರು. ಈ ವೇಳೆ ಪೌರ ಕಾರ್ಮಿಕರು ನೆರವಿಗೆ ಧಾವಿಸಿ ಮಗುವಿನ ಅಂತ್ಯಕ್ರಿಯೆ ನೆರೆವೇರಿಸಿ ಮಾನವೀಯತೆ ತೋರಿಸಿದರು.
ಲಾಕ್ಡೌನ್ ಮಧ್ಯೆ ಮೃತಪಟ್ಟ ಹಸುಗೂಸು: ಶವ ಸಂಸ್ಕಾರಕ್ಕೆ ಪೌರಕಾರ್ಮಿಕರ ನೆರವು - ಯಾದಗಿರಿ ಲೇಟೆಸ್ಟ್ ನ್ಯೂಸ್
ಯಾದಗಿರಿಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಮಗುವಿನ ಅಂತ್ಯಸಂಸ್ಕಾರ ನಡೆಸಲು ಪರದಾಡುತ್ತಿದ್ದ ದಂಪತಿಗೆ ಪೌರ ಕಾರ್ಮಿಕರು ನೆರವು ನೀಡಿ ಮಾನವೀಯತೆ ಮೆರೆದರು.
![ಲಾಕ್ಡೌನ್ ಮಧ್ಯೆ ಮೃತಪಟ್ಟ ಹಸುಗೂಸು: ಶವ ಸಂಸ್ಕಾರಕ್ಕೆ ಪೌರಕಾರ್ಮಿಕರ ನೆರವು Civic labour help to Baby Funeral at Yadgir](https://etvbharatimages.akamaized.net/etvbharat/prod-images/768-512-6580480-thumbnail-3x2-hasa.jpg)
ಮಗುವಿನ ಶವ ಸಂಸ್ಕಾರಕ್ಕೆ ನೆರವು ನೀಡಿದ ಪೌರಕಾರ್ಮಿಕರು
ಜಿಲ್ಲೆಯ ಶಹಾಪೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಕಲ್ಯಾಣ ಸಿಂಗ್ ಎಂಬುವವರ 25 ದಿನದ ಹಸುಗೂಸು ಅನಾರೋಗ್ಯದಿಂದ ಮೃತಪಟ್ಟಿದೆ. ಮಗುವಿನ ಶವ ಸಂಸ್ಕಾರ ಮಾಡವುದಕ್ಕೂ ಆಗದೆ ಪೋಷಕರು ಸಂಕಷ್ಟದಲ್ಲಿದ್ದರು. ಈ ವಿಚಾರ ತಿಳಿದ ಸ್ಥಳೀಯ ಎಸ್ಡಿಪಿಐ ನಾಯಕರು ಹಾಗೂ ನಗರಸಭೆ ಪೌರ ಕಾರ್ಮಿಕರು ಕಲ್ಯಾಣಸಿಂಗ್ ನೆರವಿಗೆ ಧಾವಿಸಿ ಅಂತಿಮ ಕಾರ್ಯ ಮುಗಿಸಲು ನೆರವಾದರು.