ಯಾದಗಿರಿ: ಫೆಬ್ರವರಿಯಲ್ಲಿ ಬಜೆಟ್ಗೆ ಪೂರ್ವ ಸಿದ್ಧತೆಯಾಗಿ ಎಲ್ಲ ಇಲಾಖೆವಾರು ಸಾಮಾನ್ಯ ಸಭೆ ನಡೆಸುವ ಹಾಗೂ ಮಾರ್ಚ್ ತಿಂಗಳಲ್ಲಿ ಬಜೆಟ್ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುವುದರಿಂದ ಸಿಎಂ ವಿದೇಶ ಪ್ರಯಾಣ ರದ್ದುಗೊಳಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಬಜೆಟ್ ಹಿನ್ನೆಲೆ ಸಿಎಂ ಬಿಎಸ್ವೈ ವಿದೇಶಿ ಪ್ರವಾಸ ರದ್ದು: ಡಿಸಿಎಂ ಕಾರಜೋಳ - ಬಜೆಟ್ ಹಿನ್ನೆಲೆ ಸಿಎಂ ವಿದೇಶಿ ಪ್ರಯಾಣ ರದ್ದು
ಬಜೆಟ್ ಅನುಮೋದನೆ ಕುರಿತಂತೆ ಸಭೆ, ಚರ್ಚೆ ಹಿನ್ನೆಲೆ ಸಿಎಂ ಬಿಎಸ್ವೈ ವಿದೇಶಿ ಪ್ರವಾಸ ರದ್ದುಗೊಳಿಸಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದರು.
![ಬಜೆಟ್ ಹಿನ್ನೆಲೆ ಸಿಎಂ ಬಿಎಸ್ವೈ ವಿದೇಶಿ ಪ್ರವಾಸ ರದ್ದು: ಡಿಸಿಎಂ ಕಾರಜೋಳ DCM Govind karjol](https://etvbharatimages.akamaized.net/etvbharat/prod-images/768-512-5669636-thumbnail-3x2-ydr.jpg)
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ
ಇನ್ನೂ ಉಪಚುನಾವಣೆ ವೇಳೆ ಯಾರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಘೋಷಿಸಲಾಗಿದೆ. ಅವರಿಗೆ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ನೀಡಲಾಗುವುದು ಎಂದು ಹೇಳಿದರು.
ಸಚಿವ ಸ್ಥಾನ ಹಂಚಿಕೆ ವಿಷಯದಲ್ಲಿ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಇದೇ ವೇಳೆ ಸಚಿವರು ಹೇಳಿದರು.