ಕರ್ನಾಟಕ

karnataka

ETV Bharat / state

ನೇಮಕಾತಿ ವಿಚಾರವಾಗಿ ಹಣದ ಬೇಡಿಕೆ ಇಟ್ಟಿದ್ದ ಅಧಿಕಾರಿಗಳಿಬ್ಬರ ಮೇಲೆ ಎಸಿಬಿ ದಾಳಿ - ACB attack in yadagiri

ನೇಮಕಾತಿ ವಿಚಾರವಾಗಿ ಹಣದ ಬೇಡಿಕೆ ಇಟ್ಟಿದ್ದ ಅಧಿಕಾರಿಗಳಿಬ್ಬರ ಮೇಲೆ ಎಸಿಬಿ ತಂಡ ದಾಳಿ ಮಾಡಿದೆ. ಡಿಹೆಚ್​ಓ ಎಂ.ಎಸ್​. ಪಾಟೀಲ್​ ಮತ್ತು ಕುಟುಂಬ ಆಯೋಜನಾಧಿಕಾರಿ ಸಿದ್ದಣಗೌಡ ಎಂಬುವರು 25 ಸಾವಿರ ರೂ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ACB attack on officers
ಅಧಿಕಾರಿಗಳಿಬ್ಬರ ಮೇಲೆ ಎಸಿಬಿ ದಾಳಿ

By

Published : Aug 11, 2020, 7:31 PM IST

ಯಾದಗಿರಿ: ವ್ಯಕ್ತಿಯೊಬ್ಬರಿಂದ ನೇಮಕಾತಿ ವಿಚಾರವಾಗಿ ಹಣದ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಎಂ.ಎಸ್. ಪಾಟೀಲ್ ಹಾಗೂ ಜಿಲ್ಲಾ ಕುಟುಂಬ ಆಯೋಜನಾಧಿಕಾರಿ ಸಿದ್ದಣಗೌಡ 25 ಸಾವಿರ ರೂ ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗುತ್ತಿದೆ.

ಈ ಅಧಿಕಾರಿಗಳು ಗುತ್ತಿಗೆ ಆಧಾರದ ಮೇಲೆ ಸ್ಟಾಫ್‌ ನರ್ಸ್ ನೇಮಕಾತಿ ವಿಚಾರವಾಗಿ 30 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರಂತೆ. ವ್ಯಕ್ತಿಯೊಬ್ಬರ ದೂರಿನ ಮೇರೆಗೆ ಎಸಿಬಿ ಡಿವೈಎಸ್ಪಿ ಗುರುನಾಥ ಮತ್ತೂರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಇಬ್ಬರು ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿರುವ ಎಸಿಬಿ ಅಧಿಕಾರಿಗಳು, ಕಚೇರಿಯಲ್ಲಿದ್ದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details