ಕರ್ನಾಟಕ

karnataka

ETV Bharat / state

ಸುರಪುರ: CITU ಸಂಘಟನೆಯ ಸುವರ್ಣ ಮಹೋತ್ಸವ ಆಚರಣೆ - surapura news

ಸುರಪುರದಲ್ಲಿ ಇಂದು ಸಿಐಟಿಯು ಸಂಘಟನೆಯ 50ನೇ ವರ್ಷಾಚರಣೆ ನಡೆಯಿತು.

surapura
ಸುರಪುರ: CITU ಸಂಘಟನೆಯ ಸುವರ್ಣ ಮಹೋತ್ಸವ ಆಚರಣೆ

By

Published : May 30, 2020, 8:09 PM IST

ಸುರಪುರ: ಸಿಐಟಿಯು ಸಂಘಟನೆಯ 50ನೇ ವಾರ್ಷಿಕೋತ್ಸವದ ನಿಮಿತ್ತ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಘೋಷಣೆಗಳ ಕೂಗುವ ಮೂಲಕ ಸುವರ್ಣ ಮಹೋತ್ಸವ ಆಚರಿಸಿದರು.

ಸುರಪುರ: CITU ಸಂಘಟನೆಯ ಸುವರ್ಣ ಮಹೋತ್ಸವ ಆಚರಣೆ

ಈ ಸಂದರ್ಭದಲ್ಲಿ ಸಂಘಟನೆ ನಾಯಕಿ ಸುರೇಖಾ ಕುಲಕರ್ಣಿ ಮಾತನಾಡಿ, ಸಿಐಟಿಯು ದೇಶದಲ್ಲಿನ ಎಲ್ಲ ವರ್ಗದ ಕಾರ್ಮಿಕರ ಮತ್ತು ಅಂಗನವಾಡಿ, ಆಶಾ, ರೈತರು ಹಾಗೂ ಶೋಷಿತರ ಪರವಾಗಿ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬರುತ್ತಿದೆ. ಮುಂದೆಯೂ ಸಂಘಟನೆ ದೇಶದಲ್ಲಿ ಮತ್ತಷ್ಟು ಬಲಗೊಳ್ಳಲಿದ್ದು ಕಾರ್ಮಿಕರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಲಿದೆ ಎಂದರು.

ಯಲ್ಲಪ್ಪ ಚಿನ್ನಾಕಾರ, ಬಸಮ್ಮ ಆಲ್ಹಾಳ ನಸೀಮಾ ಮುದನೂರು ಸೇರಿದಂತೆ ಈ ವೇಳೆ ಅನೇಕರು ಉಪಸ್ಥಿತರಿದ್ದರು.

ABOUT THE AUTHOR

...view details