ಕರ್ನಾಟಕ

karnataka

ETV Bharat / state

ರೈತರ ಕಬ್ಬಿನ ಬಾಕಿ ಬಿಲ್​​ ಪಾವತಿಸಲು ಸಕ್ಕರೆ ಕಾರ್ಖಾನೆಗಳಿಗೆ ಡಿಸಿ ಸೂಚನೆ - ರೈತರ ಕಬ್ಬಿನ ಬಿಲ್​ ವಿಜಯಪುರ

ಬಾಕಿ ಉಳಿದಿರುವ ರೈತರ ಕಬ್ಬಿನ ಬಿಲ್​ಅನ್ನು ಏಳು ದಿನಗಳೊಳಗಾಗಿ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

YS Patil
ಜಿಲ್ಲಾಧಿಕಾರಿ ಸಭಾ ಭವನ

By

Published : Feb 27, 2020, 7:49 PM IST

ವಿಜಯಪುರ:ಬಾಕಿ ಉಳಿದಿರುವ ರೈತರ ಕಬ್ಬಿನ ಬಿಲ್​ಅನ್ನು ಏಳು ದಿನಗಳೊಳಗಾಗಿ ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅನೇಕ ಕಾರ್ಖಾನೆಗಳು ರೈತರ ಕಬ್ಬಿನ ಹಣ ನೀಡದಿರೋದು ರೈತರು ನಮ್ಮ ಗಮನಕ್ಕೆ ತಂದಿದ್ದಾರೆ. ಕೆಲ ಫ್ಯಾಕ್ಟರಿಗಳು ಬಾಕಿ ಹಣ ನೀಡಿವೆ. ಇನ್ನು ಕೆಲವು ಕಾರ್ಖಾನೆಗಳು ಬಿಲ್​ ಬಾಕಿ ಉಳಿಸಿಕೊಂಡಿವೆ. ಮುಂದಿನ‌ ಏಳು ದಿನಗಳ ಒಳಗೆ ಅದನ್ನು ಪಾವತಿಸಬೇಕು. ಇಲ್ಲದಿದ್ದಲ್ಲಿ ಬಿಲ್ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಮುಂದಾಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೇಳಿದರು.

ವಿಜಯಪುರದ ಜಿಲ್ಲಾಧಿಕಾರಿ ಸಭಾ ಭವನ

ಇನ್ನು ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆ ವಿರುದ್ಧ ಪರಿಸರ ಮಾಲಿನ್ಯ ಕುರಿತು ದೂರು ಬಂದಿದ್ದು, ಸಂಭವಿಸಿದ ಮಾಲಿನ್ಯ ನಿಯಂತ್ರಣಕ್ಕೆ ಮಂಡಳಿಯ ಸಮನ್ವಯತೆ ಸಾಧಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿದರು. ಸಭೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಸುರೇಖಾ ಹಾಗೂ ವಿವಿಧ ಸಕ್ಕರೆ ಕಾರ್ಖಾನೆಗಳ‌ ವ್ಯವಸ್ಥಾಪಕರು ಉಪಸ್ಥಿತರಿದ್ದರು.

ABOUT THE AUTHOR

...view details