ವಿಜಯಪುರ: ಲಾರಿ ಹಿಂಬದಿ ಚಕ್ರದಡಿ ಸಿಲುಕಿ ಯುವಕ ಸಾವನ್ನಪ್ಪಿರುವ ಘಟನೆ ನಗರದ ಹಿಟ್ಟಿನಹಳ್ಳಿ ಫಾರ್ಮ್ ಬಳಿ ನಡೆದಿದೆ.
ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್: ಲಾರಿ ಚಕ್ರದಡಿ ಸಿಲುಕಿ ಯುವಕ ಸಾವು - crime news vijayapura
ಯುವಕನೊಬ್ಬ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಹಿಂಬದಿ ಚಕ್ರದಡಿ ಸಿಲುಕಿ ವಿಜಯಪುರದ ಹಿಟ್ಟಿನಹಳ್ಳಿ ಫಾರ್ಮ್ ಬಳಿ ಸಾವನ್ನಪ್ಪಿದ್ದಾನೆ.
![ರಸ್ತೆ ವಿಭಜಕಕ್ಕೆ ಗುದ್ದಿದ ಬೈಕ್: ಲಾರಿ ಚಕ್ರದಡಿ ಸಿಲುಕಿ ಯುವಕ ಸಾವು vijaypura](https://etvbharatimages.akamaized.net/etvbharat/prod-images/768-512-6377609-thumbnail-3x2-vid.jpg)
ಸಾವನ್ನಪ್ಪಿದ ಯುವಕ
ನಗರದ ಜಲನಗರ ನಿವಾಸಿ ಪ್ರವೀಣ ಹಳ್ಳೆಪ್ಪಗೋಳ(25) ಮೃತ ಯುವಕನಾಗಿದ್ದು, ಈತ ಬೈಕ್ನಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ರಸ್ತೆಯ ಡಿವೈಡರ್ಗೆ ಡಿಕ್ಕಿ ಹೊಡೆದು ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾನೆ. ಈ ಘಟನೆ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರಲ್ಲಿ ತಡರಾತ್ರಿ ನಡೆದಿದೆ.
ಇನ್ನು ಈ ಘಟನೆ ಸಂಬಂಧ ನಗರದ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.