ಕರ್ನಾಟಕ

karnataka

By

Published : Oct 25, 2019, 12:10 PM IST

ETV Bharat / state

ಕೈಯಲ್ಲಿ ಸಲಾಯಿನ್ ಸಿರಿಂಜ್​ ಇದ್ದರೂ ಗಂಗಾ ಪೂಜೆಯಲ್ಲಿ ಭಾಗಿಯಾದ ಯತ್ನಾಳ್​

ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ್​ ಯತ್ನಾಳ್ ಅನಾರೋಗ್ಯವನ್ನೂ ಲೆಕ್ಕಿಸದೆ, ನಗರದಲ್ಲಿ ಪುನ​ಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.

ಬಲಗೈಗೆ ಸಲಾಯಿನ್ ಸೆಟ್ ಅಳವಡಿಸಿಕೊಂಡು ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದ ಯತ್ನಾಳ್​

ವಿಜಯಪುರ:ವಿಜಯಪುರ ನಗರ ಶಾಸಕ‌ ಬಸನಗೌಡ ಪಾಟೀಲ್​ ಯತ್ನಾಳ್ ಅವರು ಅನಾರೋಗ್ಯವನ್ನೂ ಲೆಕ್ಕಿಸದೆ, ನಗರದಲ್ಲಿ ಪುನ​ಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆಯಲ್ಲಿ ಭಾಗಿಯಾಗಿದ್ದರು.

ಅನಾರೋಗ್ಯದ ನಡುವೆಯೂ ಬಲಗೈಗೆ ಸಲಾಯಿನ್ ಏರಿಸುವ ಸಿರಿಂಜ್​ ಅಳವಡಿಸಿಕೊಂಡು ನಗರದ ವಾರ್ಡ್ ನಂಬರ್​ 4ರಲ್ಲಿ ಪುನ​ಶ್ಚೇತನಗೊಂಡ ಪುರಾತನ ಬಾವಿಯ ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಪೂಜೆ ನೆರವೇರಿಸಿದರು.

ಕಳೆದ ಎರಡು ದಿನಗಳಿಂದ ಶಾಸಕ ಯತ್ನಾಳ್ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದ ಕಾರಣ, ಅವರ ಆರೋಗ್ಯದಲ್ಲಿ ಏರಪೇರಾಗಿತ್ತು. ಹೀಗಾಗಿ ವೈದ್ಯರು, ಶಾಸಕ ಯತ್ನಾಳ್​ ಅವರಿಗೆ ವಿಶ್ರಾಂತಿ ಪಡೆಯುವಂತೆ ತಿಳಿಸಿದ್ರು.

ABOUT THE AUTHOR

...view details