ಮುದ್ದೇಬಿಹಾಳ :ಪ್ರಾಚೀನ ಕಾಲದ ಇತಿಹಾಸ ಹೊಂದಿರುವ ಇಲ್ಲಿನ ಕಿಲ್ಲಾ ಗಲ್ಲಿಯ ಹೆಸರನ್ನು ಪುರಸಭೆಯ ದಾಖಲೆಗಳಲ್ಲಿ ರದ್ದುಗೊಳಿಸಲಾಗಿದ್ದು, ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದ ಉದಯ ರಾಯಚೂರ ಎಂಬಾತ, ಅಧಿಕಾರಿಗಳು ನೀಡಿದ ಲಿಖಿತ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆದಿದ್ದಾರೆ.
ಕಳೆದೆರಡು ದಿನಗಳಿಂದ ಇಲ್ಲಿನ ಕಿಲ್ಲಾ ನಿವಾಸಿ ಉದಯ ರಾಯಚೂರ ಪುರಸಭೆಯ ದಾಖಲೆಗಳಲ್ಲಿ ಕಿಲ್ಲಾ ಗಲ್ಲಿಯ ಹೆಸರನ್ನು ಸೇರಿಸಬೇಕು ಹಾಗೂ ಇದನ್ನು ರದ್ದುಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಏಕಾಂಗಿಯಾಗಿ ಪಟ್ಟಣದ ಪುರಸಭೆಯ ಎದುರಿಗೆ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ. ಇದಕ್ಕೆ ಮಣಿದ ಅಧಿಕಾರಿಗಳು ಇಂದು ಲಿಖಿತ ಭರವಸೆ ನೀಡಿ ಆತನನ್ನು ಉಪಚರಿಸಿದರು.