ಕರ್ನಾಟಕ

karnataka

ETV Bharat / state

ಭೀಮಾತೀರದ ಹಂತಕ ಬೆಂಬಲಿಗನ ಮೇಲಿನ ಹಲ್ಲೆ ಆರೋಪಿ ಅಂದರ್​ - ಎಸ್ಪಿ ಪ್ರಕಾಶ್​ ನಿಕ್ಕಂ

ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಬೆಂಬಲಿಗನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಪ್ರಕಾಶ್​ ನಿಕ್ಕಂ, ಹಲ್ಲೆ ನಡೆಸಿದ್ದ ಪುಟ್ಟು ಹಡಪದ ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಎಸ್ಪಿ ಪ್ರಕಾಶ್​ ನಿಕ್ಕಂ

By

Published : Jun 29, 2019, 1:18 PM IST

ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಬೆಂಬಲಿಗನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಪ್ರಕಾಶ್​ ನಿಕ್ಕಂ, ಹಲ್ಲೆ ನಡೆಸಿದ್ದ ಪುಟ್ಟು ಹಡಪದ ಎಂಬುವನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಎಸ್ಪಿ ಪ್ರಕಾಶ್​ ನಿಕ್ಕಂ

ಕಳೆದ ರಾತ್ರಿ ವಿಜಯಪುರದಲ್ಲಿ ಧರ್ಮರಾಜ್ ಚಡಚಣ ಬೆಂಬಲಿಗ ಬಾಬೂರಾವ್​​ ಬಿರಾದಾರ ಎಂಬವವನು ತನ್ನ ಆಟೋದಲ್ಲಿ ಧರ್ಮರಾಜ ಚಡಚಣ ಹಾಡು ಹಾಕಿಕೊಂಡು ಹೋಗುತ್ತಿದ್ದಾಗ ಮತ್ತೊಂದು ಗುಂಪಿನ ಯುವಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಹಲ್ಲೆ ನಡೆಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ, ಈ ಸಂಬಂಧ ಮೂವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪುಟ್ಟು ಹಡಪದ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನು ಇಬ್ಬರನ್ನು ಬಂಧಿಸಬೇಕಾಗಿದ್ದು ಅವರನ್ನು ಶೀಘ್ರ ಬಂಧಿಸಲಾಗುವುದು ಎಂದ ಎಸ್​​​ಪಿ ತಿಳಿಸಿದ್ದಾರೆ.

ABOUT THE AUTHOR

...view details